Tuesday 25 May 2021

ಜೀವನ್ ಮೃತ್ಯು ! ಕೊರೊನ ನಡುವೆ ಬದುಕು ಹೇಗೆ

ಸ್ನೇಹಿತರೇ, ನಮಗೆ ತಿಳಿದಿರುವ ಹಾಗೇ ಈ ಜಗತ್ತಿನಲ್ಲಿ ನಾವು ಊಹೆಗೂ ನಿಲುಕಿಸದ ಪರಿಸ್ಥಿತಿ ಬಂದೊದಗಿದೆ. ಕಾಲವು ಚಲಿಸುತ್ತಲೇ ಇದೆ ಆದರೆ ಈ ಕಾಲವನ್ನು ಕಣ್ಣಿಗೆ ಕಾಣದ ವೈರಸ್ ನಡೆಸುತ್ತಿದೆ. ಹಲವಾರು ಸಂಶೋಧನೆಗಳನ್ನು ಮಾಡುತ್ತಾ ಮುಂದುವರಿಯುತ್ತಿದ್ದ ನಮ್ಮ ಮನುಕುಲಕ್ಕೆ ಕೊರೋನಾವೇ ಸವಾಲಾಗಿದೆ. ಇಂತಹ ಕೊರೋನ ಹಲವಾರು ಜನರ ಜೀವವನ್ನು ತೆಗೆದಿದೆ ಮತ್ತೊಮ್ಮೆ ದ್ವಾಪರಯುಗದ ಯುದ್ಧನಂತರದ ಹೆಣಗಳ ರಾಶಿಯನ್ನು ನೆನಪುಮಾಡುವಂತಿದೆ. ಕೆಲವರ ಜೀವನದಲ್ಲಿ ಯಾರೂ ಇಲ್ಲದಂತೆ ಒಂಟಿ ಮಾಡಿದೆ. ಕೆಲವರು ಮನೆಯೊಳಗೇ ಕಿರುಕುಳ ಅನುಭವಿಸುತ್ತಿದ್ದಾರೆ, ಬಾಲ್ಯವಿವಾಹ ಮತ್ತೆ ನಡೆಯುತ್ತಿದೆ. ಸಮಾಜದ ಭೀತಿಯಿಂದ ಸೋಂಕಿತರು ನರಳುತ್ತಿದ್ದಾರೆ, ವೆಚ್ಚಭರಿಸಲಾರದೇ ಸಾಯುತ್ತಿದ್ದಾರೆ. ಈ ರೀತಿ ಇದು ಆವರಿಸಿರುವುದು ದೇಹಮಾತ್ರವಲ್ಲ ಮನಸ್ಸನ್ನು ಕೂಡ ಎಂದು ತಿಳಿಸಿದೆ. ಕೆಲವೆಡೆ ಭಾವನೆಗಳಿಗೆ ಬೆಲೆಯೇ ಇಲ್ಲದಂತೆ ಮಾಡುತ್ತಿದೆ. ಮನುಷ್ಯರ ಮನಸ್ಸುಗಳ ಮಧ್ಯೆ ಬಾಂಧವ್ಯವನ್ನು ಕಸಿಯುತ್ತಿದೆ. ಇನ್ನೂ ಕೆಲವೆಡೆ ಯಾವಾಗಲೂ ಕೆಲಸ, ಓಡಾಟದ ನಡುವೆ ಬ್ಯುಸಿಯಾಗಿದ್ದವರನ್ನು ಒಂದೆಡೆ  ಸೇರಿಸಿ ಒಗ್ಗಟ್ಟನ್ನು ಕೂಡ ಕಲಿಸುತ್ತಿದೆ. ಕೊರೊನ ಜೀವನವನ್ನು ಕಲಿಸುತ್ತಿದೆ,ಹಾಗೇಹೆ ಮೃತ್ಯು ಕೂಪಕ್ಕೂ ತಳ್ಳುತಿದೆ. ಈ ರೀತಿ ಮಹಾಮಾರಿ ನಮ್ಮನ್ನು ಆಡಿಸುತ್ತಿದೆ.  ಮೊದಲ ಅಲೆಗಿಂತಲೂ ಎರಡನೇ ಅಲೆಯಲ್ಲಿ ಹಳ್ಳಿಹಳ್ಳಿಗೂ ಕಾಲಿಟ್ಟ ಕೊರೋನ ಬಂಧುಗಳಂತೆ ಇದ್ದ ಅಕ್ಕಪಕ್ಕದ ಜನರ ನಿಜಮುಖ ದರ್ಶನಮಾಡಿಸಿದೆ.ಹಾಗೆಯೇ ನಿಜವಾದ ಒಳ್ಳೆಯ ಭಾವನೆ ಇರುವ ಮನುಷ್ಯರನ್ನೂ ಕೂಡ ಪರಿಚಯಿಸುತ್ತದೆ. ಗುಂಪು ಗೂಡಿ ಲಗೋರಿ, ಕುಂಟೆಬಿಲ್ಲೆ ಆಡುತ್ತಿದ್ದ ಮಕ್ಕಳು ಇದೀಗ ಕೇವಲ ಒಂದೇ ಜಾಗದಲ್ಲಿ ಕುಳಿತು ಮೊಬೈಲ್ ಎಂಬ ಪ್ರಪಂಚದೊಳಗೆ ಇಳಿದಿದ್ದಾರೆ. ಇನ್ನೂ ಕೆಲವರು ಚಿತ್ರಕಲೆ, ಸಂಗೀತ, ನೃತ್ಯ ಮುಂತಾದವುಗಳಲ್ಲಿ ತೊಡಗಿಸಿಕೊಂಡು ಜಡವಾಗಿರದೆ ಇರಲು ಪ್ರಯತ್ನಿಸುತ್ತಿದ್ದಾರೆ.
ಸ್ನೇಹಿತರೇ, ಹೀಗೆಲ್ಲಾ ಇರುವಾಗ ಕೊರೋನ ಬಂದ ವ್ಯಕ್ತಿಯು ಯಾವ ಕ್ಷಣಕ್ಕೂ ಹೆದರದೆ, ಹಾಗೆಯೇ ಸಾಮಾನ್ಯ ಜ್ವರವೆಂದು ಕೂಡ ತಡೆಗಣಿಸದೇ ಟೆಸ್ಟ್ ಮಾಡಿಸಿ ಅಥವಾ ರೋಗಲಕ್ಷಣಗಳು ಕಂಡು ಬಂದಲ್ಲಿ ದಿನಕ್ಕೆ ನಾಲ್ಕು ಬಾರಿ ಬಿಸಿನೀರಿನ ಹಬೆ, ಲಿಂಬೆ ಹಣ್ಣನ್ನು ನೀರಿಗೆ ಹಿಂಡಿ ಕುಡಿಯುವುದು. ನೆಲನೆಲ್ಲಿ, ತುಳಸಿಯಂತಹ ಔಷಧೀಯ ಸಸ್ಯಗಳ ಕಷಾಯ ಕುಡಿಯುವುದು, ಕಫ ಕಟ್ಟದೇ ಇರುವ ರೀತಿ ಮುನ್ನೆಚ್ಚರಿಕೆ ವಹಿಸುವುದು, ಇಮ್ಯೂನಿಟಿ ಜಾಸ್ತಿ ಮಾಡುವಂತಹ ಹಣ್ಣು, ತರಕಾರಿ , ಸೊಪ್ಪನ್ನು ತಿನ್ನುವುದು. ಪದೇ ಪದೇ ಕೈ ತೊಳೆದುಕೊಳ್ಳುವುದು ಇದರ ಜೊತೆ ಜೊತೆಗೆ ಉತ್ತಮ ಡಾಕ್ಟರ್ ಸಲಹೆ ಪಡೆದು ಔಷಧೀಯನ್ನು ತೆಗೆದುಕೊಳ್ಳುವುದು. ರೋಗ ಲಕ್ಷಣಗಳು ಕಾಣಿಸಿಕೊಂಡ ತಕ್ಷಣ ಆ ವ್ಯಕ್ತಿ ಮನೆಯವರಿಂದ ಸ್ವಲ್ಪ ಅಂತರ ಕಾಯ್ದು ಕೊಳ್ಳುವುದು, ಕೆಮ್ಮುವಾಗ , ಸೀನುವಾಗ ಕರವಸ್ತ್ರ ಬಳಸಿ ನಂತರ ಅದನ್ನು ಚೆನ್ನಾಗಿ ತೊಳೆದು ಹಾಕುವುದು. ಈ ರೀತಿಯಿಂದ ನಾವು ಈ ಕಾಯಿಲೆಯಿಂದ ಸ್ವಲ್ಪ ಸುಧಾರಿಸಬಹುದು.
ಸ್ನೇಹಿತರೇ ನಾವು ಸುರಕ್ಷಿತವಾಗಿ ಅಂತರವನ್ನುಕಾಪಾಡಿಕೊಂಡು ಮಾಸ್ಕನ್ನು ಧರಿಸಿ  ಕಷ್ಟದಲ್ಲಿರುವವರಿಗೆ ಸಹಾಯ ಮಾಡೋಣ.  ಜೀವಾಮೃತ ನೀಡುವ ಡಾಕ್ಟರ್ ನರ್ಸ್ಗ್ ಳು ಹೆದರಿ ರೋಗಿಯ ಕಡೆ ನೋಡಿಲ್ಲ ವೆಂದರೆ ನಮ್ಮಕತೆಏನಾಗುತ್ತಿತ್ತು? ಯಾರು ಸಹಾಯ ಮಾಡದೇ ಇದ್ದರೆ ಹಳ್ಳಿಮನೆಯಲ್ಲಿ ಒಂಟಿ ಇರುವವರ ಕತೆಯೇನು? ಸಹಾಯಮಾಡಲಾಗದಿದ್ದರೂ ಇಲ್ಲ ಸಲ್ಲದ ಮಾತಾಡುವುದನ್ನು ಬಿಟ್ಟು, ಸಾಧ್ಯವಾದರೆ ಕರೆ ಮಾಡಿಯಾದರೂ ಮಾತಾಡಿ ಯೋಗಕ್ಷೇಮ ವಿಚಾರಿಸಿ  ಅವರಿಗೆ ಧೈರ್ಯ ತುಂಬೋಣ. ಸಹಾಯ ಮಾಡುವವರನ್ನು ಗೌರವಿಸೋಣ.                              
ಹೀಗೆಯೇ ಈ ಸಮಯದಲ್ಲೂ ಕೂಡ ಸಾಧಕರು ರೈತರು ತಟಸ್ಥವಾಗಿಲ್ಲ, ಹಾಗೆಯೇ ನಾವೆಲ್ಲರೂ ಈ ಲಾಕ್ಡೌನ್ ಸಮಯವನ್ನು ಸದುಪಯೋಗ ಪಡಿಸಿಕೊಳ್ಳೋಣ,ಹೊಸತನ್ನು ಕಲಿಯೋಣ.ನಮ್ಮ ಗುರಿಯೆಡೆಗೆ ತಲುಪುವ ತಯಾರಿ ಮಾಡಲು ಅವಕಾಶ ಸಿಕ್ಕಿದೆ ಬಳಸಿಕೊಳ್ಳೋಣ. ಲಾಕ್ಡೌನ್ ಆದರೂ ಕಾಲ ನಿಂತಿಲ್ಲ, ನಮ್ಮಹಸಿವು ನಿಂತಿಲ್ಲ, ಈ ಸಮಯವನ್ನು ಧೈರ್ಯದಿಂದ ಎದುರಿಸೋಣ.ಮನೆಯಲ್ಲಿದ್ದು ನಮ್ಮ ಆರೋಗ್ಯವನ್ನು ಕಾಪಡಿಕೊಳ್ಳೋಣ.   ************************       
#ಅನನ್ಯ ವಿ ಎಂ 
#ವರ್ತೆಗದ್ದೆ

Tuesday 18 May 2021

ಕರ್ಣನ್ KARNAN ಹೇಗಿದೆ ಗೊತ್ತಾ!!??

ಕರ್ಣನ್ , ಧನುಷ್  ಅಭಿನಯದ ಅದ್ಬುತ ಸಿನಿಮಾ!!.
ಈ ಸಿನಿಮಾದ ಕಂಟೆಂಟ್ ಸರಳವಾದದ್ದು ಆದರೂ ತೆರೆಮೇಲೆ ಹೆಣೆದಿರುವ ರೀತಿ ಅದ್ಭುತ ಅತ್ಯದ್ಭುತ ಅಮೋಘ.. 

ಚಿತ್ರ ಕೊಂಚ ನಿಧಾನವಾಗಿ ವಾಗಿ ಸಾಗ್ತಾ ಇದ್ರು ಸಹ ಸಾಮಾನ್ಯವಾಗಿ ಕೇಲವೊಂದು ಚಿತ್ರಗಳಲ್ಲಿ ಶಾಟ್ ಗಳನ್ನ ನೋಡಿ ಮುಂದೆ ಹೀಗೆ ಆಗಬಹುದು ಎಂದು ಊಹಿಸಬಹುದು ಆದರೆ ಖಂಡಿತ ಇಲ್ಲಿ ಅದು ಸಾಧ್ಯವಿಲ್ಲ  . 

ನಿರ್ದೇಶಕ  ಇಲ್ಲಿ ಯಾವುದೇ ಕಲ್ಪನ (Fantasy) ಯಲ್ಲಿ ಪ್ರೇಕ್ಷಕರನ್ನ ತೇಲಿಸುವ ಪ್ರಯತ್ನವೇ ಮಾಡಿಲ್ಲ ಇಲ್ಲಿ ಎಲ್ಲವೂ ನೈಜತೆಗಳನ್ನ ಒಳಗೊಂಡಿದೆ ಪ್ರತಿಯೊಂದು  ಸಾಮಾನ್ಯ ಜನರ ಜನ ಜೀವನಗಳ ಒಳಗೊಂಡಿದೆ.

ಮೂವಿ ಫ್ರೆಮ್ to ಫ್ರೆಮ್ ಅದ್ಭುತವಾಗಿ ಮೂಡಿ ಬಂದಿದ್ದು.. ಪೊಲೀಸರು ಬಂದಾಗ ಊರಿನವರೆಲ್ಲ ದೊಡ್ಡ ನೀರಿನ ಟ್ಯಾಂಕ್ ಮೇಲೆ ಅಡಗಿ ಕೂತಿರುತ್ತಾರೆ ಎಂದು ಯಾರು ಊಹಿಸಲು ಸಾಧ್ಯವಿಲ್ಲ ಅಷ್ಟು ಅದ್ಭುತವಾಗಿದೆ ಆ ದೃಶ್ಯ.. ಕುದುರೆ  ಓಡಿಸದ ಬಾಲಕ ಊರಿಗಾಗಿ ಕುದುರೆ ಹತ್ತಿ ಹೋಗುವುದು ರೋಮಾಂಚನಕಾರಿ ಆಗಿದೆ.. 

ಮೊದಲಾರ್ಧದಲ್ಲಿ ಕುಂಟುತ್ತಾ ಸಾಗುವ ಕತ್ತೆಯ  ಕಾಲಿನಂತೆ ಮೊದಲಾರ್ಧ ನಿಧಾನವಾಗಿ ಇತ್ತು ಆದ್ರೆ ಖಂಡಿತ ಸಪ್ಪೆ ಆಗಿರಲಿಲ್ಲ.. ಕತ್ತೆಯ ಕಾಲಿನ ಹಗ್ಗ ಕಡಿದ ನಂತರ ಮೂವಿಯ ಓಟ ಕ್ಕೆ ಎಲ್ಲೆಯಿಲ್ಲ.. ನಿಮ್ಮನ್ನ ಪ್ರತಿ ಸೆಕೆಂಡ್ ಹಿಡಿದಿರುಸುತ್ತದೆ. ಅಲ್ಲಲ್ಲಿ ಧನುಷ್ ತೀರಿ ಹೋದ ತಂಗಿಯ Referance ವಿಭಿನ್ನವಾಗಿದೇ.

ಹಳ್ಳಿ ಯ ಜೀವನ , ಹಳ್ಳಿಯ ಅವ್ಯವಸ್ಥೆ ಕೆಟ್ಟ ವ್ಯವಸ್ಥೆಯ ವಿರುದ್ಧ  ಪೊಲೀಸರ ದರ್ಪ  ಎರಡು ಊರಿನ ನಡುವಿನ ವೈಷಮ್ಯ ದ ನಡುವಿನ ಹೋರಾಟವೇ ಈ ಕರ್ಣನ್..

ಒಟ್ಟಾರೆ ಬಿಜಿಎಮ್ ಬೆಂಕಿ.. ಸಿನಿಮಾಟೋಗ್ರಾಫಿ ಚಿಂದಿ. ಪ್ರತಿಯೊಬ್ಬರ ನಟನೆಯು ಅಮೇಜಿಂಗ್.
ಚಿತ್ರ ಅಮೆಜಾನ್ ಪ್ರೈಮ್ ನಲ್ಲಿದ್ದು ಚಿತ್ರ  ಟೈಮ್ ಇದ್ದಾಗ ಬಿಡುವು ಇದ್ದಾಗ ನೋಡಿದ್ರು ಅಥವಾ ನೀವೇ ಬಿಡುವು ಮಾಡಿಕೊಂಡು ಟೈಮ್ ಮಾಡಿಕೊಂಡು ನೋಡಿದ್ರು ಏನು ತೊಂದರೆ ಇಲ್ಲ ಅಂತಹದೊಂದು ಅದ್ಭುತ ಚಿತ ಕರ್ಣನ್..


Monday 5 April 2021

ದಯವಿಟ್ಟು ಗಮನಿಸಿ !! ರಾಜ್ಯದಲ್ಲಿ ನಾಳೆ ಇಂದ ಮಳೆಯಂತೆ!?

ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ಸೂಚಿಸಿದ್ದು ಏಪ್ರಿಲ್ 6 ರಿಂದ 10 ರ ವರೆಗೆ ಅಲ್ಲಲ್ಲಿ ಮಳೆಯಾಗಲಿದೆ ಎಂದಿದ್ದಾರೆ.

ಏಪ್ರಿಲ್ 6 ರಂದು ಮೈಸೂರು, ಹಾಸನ, ಕೊಡಗು, ಚಾಮರಾಜನಗರ, ಚಿಕ್ಕಮಗಳೂರು ಜಿಲ್ಲೆಗಳ ವ್ಯಾಪ್ತಿಯಲ್ಲಿ ಮಳೆಯಾಗಲಿದೆ.

ಏಪ್ರಿಲ್ 7 ರಂದು ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಮತ್ತು ದಕ್ಷಿಣ ಒಳನಾಡು ಭಾಗದ ಚಾಮರಾಜನಗರ, ಹಾಸನ, ಮೈಸೂರು, ಕೊಡಗು ಭಾಗದಲ್ಲಿ ಮಳೆಯಾಗಲಿದೆ.

ಏಪ್ರಿಲ್ 8 ರಂದು ಕರಾವಳಿ ಹಾಗೂ ಮಲೆನಾಡಿನ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ, ಮೈಸೂರು, ಕೊಡಗು, ಹಾಸನದಲ್ಲಿ ಮಳೆಯಾಗಲಿದೆ.

ಏಪ್ರಿಲ್ 9 ರಂದು ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಧಾರವಾಡ, ಕಲಬುರಗಿ, ಬೆಳಗಾವಿ, ಶಿವಮೊಗ್ಗ, ಮೈಸೂರು, ಕೊಡಗು, ರಾಯಚೂರು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳ ವ್ಯಾಪ್ತಿಯಲ್ಲಿ ಮಳೆಯಾಗಲಿದೆ.

ಏಪ್ರಿಲ್ 10 ರಂದು ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಕಲಬುರಗಿ, ರಾಯಚೂರು, ಚಿಕ್ಕಮಗಳೂರು, ಶಿವಮೊಗ್ಗ, ಮೈಸೂರು, ಕೊಡಗು, ಹಾಸನ, ಚಿಕ್ಕಮಗಳೂರು, ಬೆಳಗಾವಿ, ಧಾರವಾಡ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ.

ಏಪ್ರಿಲ್ 7 ರವರೆಗೆ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಮೂರು ದಿನಗಳ ಕಾಲ ಒಣಹವೆ ಇರಲಿದೆ ಎಂದು ಹೇಳಲಾಗಿದೆ.

ಧರೆಗೆ ಮಳೆಯ ಸಿಂಚನದಿಂದ ಬಿಸಿಲ  ಬೆಗೆಯಿಂದ ಕಂಗೆಟ್ಟಿದ್ದ ಜನಕ್ಕೆ ಕೊಂಚ ಕೂಲ್ ಅನುಭವ ಆಗುವುದಂತೂ ಸುಳ್ಳಲ್ಲ.!



Saturday 3 April 2021

ಕ್ರಿಕೆಟ್ ಅಭಿಮಾನಿಗಳಿಗೆ ಶಾಕ್ ! ಹೀಗಾದ್ರೆ ಐಪಿಎಲ್ ಕಥೆ ಮುಂದೇನು!!??

ಹೌದು ವಿಶ್ವದಲ್ಲೇ ಅತಿ ಶ್ರೀಮಂತಿಕೆಯ ಹಾಗೂ ವರ್ಣರಂಜಿತ ಕ್ರಿಕೆಟ್ ಟೂರ್ನಮೆಂಟ್ ಗಳ ಅಗ್ರಸ್ಥಾನದಲ್ಲಿ ನಮ್ಮೆಲ್ಲರ ತರ್ಕಕ್ಕೆ ಬರುವುದು ಐಪಿಎಲ್, ಇನ್ನೇನು ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇರುವಾಗಲೇ ಶಾಕ್ ಮೇಲೆ 
ಶಾಕ್!! ಐಪಿಎಲ್ ಗೆ ವಿಘ್ನ ಎದುರಾಗಿದೆ. ಎರಡು ದಿನಗಳ ಹಿಂದಷ್ಟೇ ಕ್ರಿಕೆಟ್ ಗಾಡ್ ಸಚಿನ್ ಕೊರೊನ ಸೋಂಕಿಗೆ ಒಳಗಾಗಿದ್ದ ಸುದ್ದಿ ಕೇಳಿದ್ದೆವು ಇದೀಗ ಡೆಲ್ಲಿ ಕ್ಯಾಪಿಟಲ್ ತಂಡದ ಸಹ ಆಟಗಾರ  ಅಕ್ಷರ್ ಪಟೇಲ್ ಗು ಸೋಂಕು ತಗುಲಿದ್ದು ಆರಂಭದಲ್ಲೇ ವಿಘ್ನ ಎದುರಾಗಿದೆ.
ವಾಂಖೆಡೆ ಸ್ಟೇಡಿಯಂ ನ 16 ಮಂದಿ ಕೆಲಸ ನಿರ್ವಾಹಕರಿಗೂ ಸೋಂಕು ತಗುಲಿದ್ದು ಐಸೋಲೇಶನ್ ನಲ್ಲಿರಿಸಲಾಗಿದೆ, ಈಗ ಕೊರೊನ ಐಪಿಎಲ್ ಮೇಲೆ ದಾಳಿ ಮಾಡುವುದಾಗಿ ಸೂಚನೆ ರವಾನಿಸಿದೆ.
ಚೆನ್ನೈ ತಂಡದಲ್ಲೂ ಕೇಸ್‌!!
ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಸದಸ್ಯರೊಬ್ಬರಿಗೆ ಕೊರೊನಾ ತಗುಲಿರುವುದು ವರದಿಯಾಗಿದೆ. ಸಿಎಸ್‌ಕೆಯ ತಾಂತ್ರಿಕ ವಿಭಾಗದ ಸದಸ್ಯರೊಬ್ಬರಲ್ಲಿ ಪಾಸಿಟಿವ್‌ ಕಂಡುಬಂದಿದೆ. ಸೋಂಕಿತ ವ್ಯಕ್ತಿ ಯಾವುದೇ ಆಟಗಾರರ ಅಥವಾ ತಂಡ ಸಿಬಂದಿಯ ಸಂಪರ್ಕ ಹೊಂದಿಲ್ಲ ಎಂದು ಸಿಎಸ್‌ಕೆ ಪ್ರಾಂಚೈಸಿ ಖಾತ್ರಿಪಡಿಸಿದೆ.

ಮತ್ತೆ ದೇಶಾದ್ಯಂತ ಕೊರೊನ 2ನೆ ಅಲೆ ಸ್ಫೋಟಗೊಂಡಿದ್ದು ದೇಶದ ಜನರಲ್ಲಿ ಮತ್ತು ಕ್ರಿಕೆಟ್ ಅಭಿಮಾನಿಗಳಲ್ಲಿ ಆತಂಕ ಹೆಚ್ಚಾಗಿದೆ.

ಅಪ್ಪು ಫ್ಯಾನ್ಸ್ ಆತಂಕ!! ಯುವರತ್ನ!! ಕೋರೊನ!! ಸರ್ಕಾರ!???

ಏಪ್ರಿಲ್ ಒಂದರಂದು ಪವರ್ ಸ್ಟಾರ್ ಪುನಿತ್ ರಾಜ್ ಕುಮಾರ್ ಅಭಿನಯದ ಯುವರತ್ನ ತೆರೆಕಂಡಿದ್ದು, ಎಲ್ಲೆಡೆ ಅತೀ ಉತ್ತಮ ಪ್ರತಿಕ್ರಿಯೆ ಪಡೆದಿದ್ದು ಕೊರೊನ ಕಾರಣದದಿಂದ ಕೊಂಚ ಹಿನ್ನಡೆ ಅನುಭವಿಸಿದ್ದ ಚಿತ್ರೋದ್ಯಮ ಈಗ  ಕೊಂಚ ವೇಗ ಕಂಡುಕೊಂಡ ಸಮಯದಲ್ಲೇ ಮತ್ತೆ ರಾಜ್ಯದಲ್ಲಿ ಕೊರೊನಾರ್ಭಟ ಹೆಚ್ಚಾದ ಕಾರಣ ನಿನ್ನೆ ಸರ್ಕಾರ ಮತ್ತೆ ಚಿತ್ರಮಂದಿರದ ಸೀಟುಗಳ ಭರ್ತಿ ಕೇವಲ 50 ಪ್ರತಿಶತಕ್ಕೆ ಇಳಿಸಾಲಾಗಿತ್ತು.  ಎಲ್ಲೆಡೆ ಅಸಮಾಧಾನ ಹೊರ ಹಾಕಿದ್ದರು. ಶಿವರಾಜ್ ಕುಮಾರ್ ಮತ್ತು ನಾಗತಿಹಳ್ಳಿ ಚಂದ್ರ ಶೇಖರ್ ಸರ್ಕಾರದ ನಿರ್ಧಾರವನ್ನು ಟ್ವಿಟರ್ ನಲ್ಲಿ  ವಣಿಜ್ಯ ಮಂಡಳಿಯ ಮನವಿಯನ್ನು ಸ್ವೀಕರಿಸಿರುವ ಸರ್ಕಾರ ಏಪ್ರಿಲ್ 7 ರ ವರೆಗೆ ನಿರ್ಬಂಧ ಸಡಿಲಿಕೆ ಮಾಡಿದೆ. ಈ ಮೂಲಕ ಮೂರು ದಿನಗಳ ಕಾಲ ನಿರ್ಬಂಧ ಸಡಿಲಿಕೆ ಮಾಡಿರುವ ಸರ್ಕಾರ, ಏಪ್ರಿಲ್ 6 ರ ಮಧ್ಯರಾತ್ರಿವರೆಗೆ ನಿರ್ಬಂಧ ಸಡಿಲಿಕೆ ಮಾಡಿದೆ. 
ಸದ್ಯ ಸರ್ಕಾರದ ಈ ನಿರ್ಧಾರದಿಂದ ಅಪ್ಪು ಅಭಿಮಾನಿಗಳು ಹಾಗೂ ಚಿತ್ರಪ್ರೇಮಿಗಳು ಕೊಂಚ ನಿರಾಳರಾಗಿದ್ದಾರೆ.

Friday 2 April 2021

ಕನ್ನಡಿಗರ ಹೃದಯ ಗೆದ್ದ ಅಪ್ಪು! ಶೇಕಡ 99 ರಷ್ಟು ಸ್ವಚ್ಛ ಸಿನಿಮಾ : ಯುವರತ್ನ!!

ಏಪ್ರಿಲ್ 1 ಕ್ಕೆ ರಾಜ್ಯಾದ್ಯಂತ ತೆರೆಗೆ ಅಪ್ಪಳಿಸಿರುವ ಸಂತೋಷ್ ಆನಂದ್ ರಾಮ್ ನಿರ್ದೇಶನದ ಪುನೀತ್  ರಾಜ್ ಕುಮಾರ್  ಪ್ರಕಾಶ್ ರೈ ಅಚ್ಯುತ್ ಕುಮಾರ್ ಪ್ರಕಾಶ್ ಬೆಳವಾಡಿ ಸಯೇಶ ಕಲಾವಿದರ ದಂಡೇ ಅಭಿನಯಿಸಿರುವಂತ ಯುವರತ್ನ ಚಿತ್ರ  ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ದೊರೆತಿದ್ದು ಮತ್ತೊಮ್ಮೆ ಪುನೀತ್ ರ ಖಾತೆ ಇಂಡಸ್ಟ್ರಿ ಹಿಟ್ ಸೇರುವುದು ಖಚಿತ. 

ಒಂದೊಳ್ಳೆ ಸಂದೇಶ ಹೊತ್ತು ತಂದಿರುವ ಈ ಚಿತ್ರ ವಿದ್ಯಾರ್ಥಿ ಜೀವನದಲ್ಲಿ ಓದಿನ ಜೊತೆಗೆ  ಕಲೆ ಸಾಹಿತ್ಯ ಕ್ರೀಡೆಗಳು ಜೀವನ ರೂಪಿಸುತ್ತವೆ ವಿದ್ಯಾರ್ಥಿಗಳ ಆಸಕ್ತಿಗೆ ಬೆಂಬಲ ಕೊಡಬೇಕು ಅನ್ನುವುದರ ಜೊತೆಗೆ  ಹೇಗೆ ಖಾಸಗಿ ಶಿಕ್ಷಣ ಸಂಸ್ಥೆಗಳು ಶಿಕ್ಷಣವನ್ನ ವ್ಯಾಪಾರಿಕರಣ ಗೊಳಿಸಿವೆ ಎನ್ನುವುದನ್ನ ತೋರಿಸುತ್ತ  ವಿದ್ಯಾರ್ಥಿಗಳು ಹೇಗೆ drugs ಗೆ ಅಡಿಕ್ಟ್ ಆಗ್ತಾ ಇದಾರೆ ಎನ್ನುವುದನ್ನ ಎಳೆ ಎಳೆಯಾಗಿ ಹೇಳ್ತಾ ಗುರುವಿನ ಮಹತ್ವ ತಿಳಿಸುತ್ತಾ ಹೋಗುತ್ತದೇ.

ಹೀರೊ ಸರ್ಕಾರಿ ಕಾಲೇಜನ್ನ ಉಳಿಸುವ ಸಲುವಾಗಿ ಹೇಗೆ ವ್ಯವಸ್ಥೆಯ ವಿರುದ್ದ ಹೊರಡುತ್ತಾನೆ ಎನ್ನುವುದೇ ಒಂದೆಳೆ ಕಥೆ ಹಾಗೆ ಇಲ್ಲಿ ಪುನೀತ್ ಜೊತೆಗೆ ಮತ್ತೊಬ್ಬ ಹೀರೊ ಇದ್ದು ಅವರೇ ಪ್ರಕಾಶ್ ರಾಜ್ ತಮ್ಮ ಅಮೋಘ ಅಭಿನಯದಿಂದ ಎಲ್ಲರ ಮನಸ್ಸು ಗೆಲ್ಲುವುದರಲ್ಲಿ ಸಂಶಯವಿಲ್ಲ. ಹೀರೋಯಿನ್ ಸಯೇಶ ಪಾತ್ರ ಚೆನ್ನಾಗಿದ್ದು ಅಂತಹದ್ದೇನು ಮಹತ್ವತೆ ಪಾತ್ರಕಿಲ್ಲ..ತಮನ್ ಉತ್ತಮ ಸಂಗೀತ ನೀಡಿದ್ದು ಚಿತ್ರದ್ದುದ್ದಕ್ಕೂ ಪ್ರೇಕ್ಷಕರರನ್ನ ಹಿಡಿದು ಕೂರಿಸುತ್ತದೆ . ಅಲ್ಲಲ್ಲಿ ಶಿವಾರಾಜ್ ಕುಮಾರ್ ರೆಫರ್ನ್ಸ್ ರಾಜಕುಮಾರ್ ರೆಫರೆನ್ಸ್ ಇರೋ ಡೈಲಾಗ್ ಗಳು  ಶಿಳ್ಳೆ ಗಿಟ್ಟಿಸಿಕೊಳ್ಳುತ್ತವೆ. 

ನೀವೊಬ್ಬರು 
 ಉತ್ತಮ ಸಂದೇಶವುಳ್ಳ ಕುಟುಂಬ ಸಮೇತರಾಗಿ ನೋಡಬಹುದಂತಹ ಯಾವುದೇ ನಾನ್ ವೆಜ್ ಜೋಕ್ ಗಳು ಇಲ್ಲದಂತ ಫ್ಯಾಮಿಲಿ ಪ್ಯಾಕೇಜ್ ಸಿನಿಮಾದ ಪ್ರೇಮಿಗಳಾಗಿದ್ದರೆ ಇನ್ನೇಕೆ ತಡ  .....



#Sanketha Gm Thirthahalli

Wednesday 6 January 2021

ಮಲೆನಾಡಿಗೆ ಅಕೇಶಿಯಾ ಬೇಡ

ನಮ್ಮೂರ ಕಾಡುಗಳ ಈಗಾಗಲೇ ಆಕ್ರಮಿಸಿದ್ದಾಗಿದೆ ಈ ಅಕೇಶಿಯಾ , ಮಲೆನಾಡೆಂದರೆ ಅರಣ್ಯ , ಜೀವ ವೈವಿಧ್ಯತೆ , ಸಂಸ್ಕೃತಿ ಅಪಾರ ನೈಸರ್ಗಿಕ ಸಂಪತ್ತಿನ ಕಣಜ.
ನೆಲದಿಂದ ಹಿಡಿದು ಎತ್ತರದ ಮರಗಳವರೆಗೂವೈವಿಧ್ಯಮಯವಾದ ಗಿಡಮೂಲಿಕೆಗಳಂತಹ ಸಂಪತ್ತು ಈ ಮಣ್ಣಿನಲ್ಲಿ ಅಡಗಿದೆ ಅಕೇಶಿಯಾದಂತಹ ಈ ಸಸ್ಯ ಪ್ರಭೇಧಗಳು ಬೆಳೆಸುವುದರಿಂದ ಪರಿಸರದ ಮೇಲೆ ಹಾನಿಯುಂಟಾಗುತ್ತಿದೆ. ಕೇವಲ ಮೂರು ದಶಕಗಳಲ್ಲೇ ಹೀನಾಯ ಮಟ್ಟದಲ್ಲಿ ಅಂತರ್ಜಲ ತಗ್ಗಿಸಿರುವ ಈ ಸಸ್ಯಗಳು ಬೆಂಗಳೂರಿನಂತೆಯೇ ಮಲೆನಾಡಿಗೂ ಪೈಪ್ ಲೈನ್ ನಲ್ಲಿ ನೀರು ಬರುವಂತೆ ಮಾಡುವುದರಲ್ಲಿ ಸ್ವಲ್ಪಮಟ್ಟಿಗೆ ಯಶಸ್ವಿಯಾಗಿವೆ. ಅಕೇಶಿಯಾ ಮೂಲತಃ ಆಸ್ಟ್ರೇಲಿಯಾ ಇಂಡೋನೇಷಿಯಾದ ಗಿಡ ಈ ಅಕೇಶಿಯ ಪ್ಲಾಂಟೇಶನ್ ಗಳಲ್ಲಿ ಹುಲ್ಲು ಸಹ ಬೆಳೆಯುವುದಿಲ್ಲ ಹಕ್ಕಿ ಗೂಡುಕಟ್ಟುವುದಿಲ್ಲ ಇದು ನಮ್ಮ ಕಾಡಿಗೆ ಜೀವ ಸಂಕುಲಗಳಿಗೆ ಪೆಟ್ಟು ನೀಡುತ್ತಿದೆ. ಈ ಅಕೇಶಿಯಾ ಬೇರುಗಳು ಭೂಮಿಯ ಮೇಲ್ಪದರದಲ್ಲೇ ಹರಡುವುದರಿಂದ ಮಣ್ಣಿನ ಫಲವತ್ತತೆ ಮತ್ತು ಅಂತರ್ಜಲ ಕೆಳಮಟ್ಟ ತಲುಪಲು ಬಿಡದೆ ಭೂಮಿಯನ್ನು ಬರಡುಮಾಡುತ್ತಿವೆ. ಸಸ್ಯಕಾಶಿ ಮಲೆನಾಡು ಬಯಲುಸೀಮೆ ಆಗುವಮುನ್ನ ಅಕೇಶಿಯ ಹೊರದಬ್ಬಲು ಪ್ರಯತ್ನಿಸಬೇಕಿದೆ.

ಜೀವನ್ ಮೃತ್ಯು ! ಕೊರೊನ ನಡುವೆ ಬದುಕು ಹೇಗೆ

ಸ್ನೇಹಿತರೇ, ನಮಗೆ ತಿಳಿದಿರುವ ಹಾಗೇ ಈ ಜಗತ್ತಿನಲ್ಲಿ ನಾವು ಊಹೆಗೂ ನಿಲುಕಿಸದ ಪರಿಸ್ಥಿತಿ ಬಂದೊದಗಿದೆ. ಕಾಲವು ಚಲಿಸುತ್ತಲೇ ಇದೆ ಆದರೆ ಈ ಕಾಲವನ್ನು ಕಣ್ಣಿ...