ನಮ್ಮೂರ ಕಾಡುಗಳ ಈಗಾಗಲೇ ಆಕ್ರಮಿಸಿದ್ದಾಗಿದೆ ಈ ಅಕೇಶಿಯಾ , ಮಲೆನಾಡೆಂದರೆ ಅರಣ್ಯ , ಜೀವ ವೈವಿಧ್ಯತೆ , ಸಂಸ್ಕೃತಿ ಅಪಾರ ನೈಸರ್ಗಿಕ ಸಂಪತ್ತಿನ ಕಣಜ.
ನೆಲದಿಂದ ಹಿಡಿದು ಎತ್ತರದ ಮರಗಳವರೆಗೂವೈವಿಧ್ಯಮಯವಾದ ಗಿಡಮೂಲಿಕೆಗಳಂತಹ ಸಂಪತ್ತು ಈ ಮಣ್ಣಿನಲ್ಲಿ ಅಡಗಿದೆ ಅಕೇಶಿಯಾದಂತಹ ಈ ಸಸ್ಯ ಪ್ರಭೇಧಗಳು ಬೆಳೆಸುವುದರಿಂದ ಪರಿಸರದ ಮೇಲೆ ಹಾನಿಯುಂಟಾಗುತ್ತಿದೆ. ಕೇವಲ ಮೂರು ದಶಕಗಳಲ್ಲೇ ಹೀನಾಯ ಮಟ್ಟದಲ್ಲಿ ಅಂತರ್ಜಲ ತಗ್ಗಿಸಿರುವ ಈ ಸಸ್ಯಗಳು ಬೆಂಗಳೂರಿನಂತೆಯೇ ಮಲೆನಾಡಿಗೂ ಪೈಪ್ ಲೈನ್ ನಲ್ಲಿ ನೀರು ಬರುವಂತೆ ಮಾಡುವುದರಲ್ಲಿ ಸ್ವಲ್ಪಮಟ್ಟಿಗೆ ಯಶಸ್ವಿಯಾಗಿವೆ. ಅಕೇಶಿಯಾ ಮೂಲತಃ ಆಸ್ಟ್ರೇಲಿಯಾ ಇಂಡೋನೇಷಿಯಾದ ಗಿಡ ಈ ಅಕೇಶಿಯ ಪ್ಲಾಂಟೇಶನ್ ಗಳಲ್ಲಿ ಹುಲ್ಲು ಸಹ ಬೆಳೆಯುವುದಿಲ್ಲ ಹಕ್ಕಿ ಗೂಡುಕಟ್ಟುವುದಿಲ್ಲ ಇದು ನಮ್ಮ ಕಾಡಿಗೆ ಜೀವ ಸಂಕುಲಗಳಿಗೆ ಪೆಟ್ಟು ನೀಡುತ್ತಿದೆ. ಈ ಅಕೇಶಿಯಾ ಬೇರುಗಳು ಭೂಮಿಯ ಮೇಲ್ಪದರದಲ್ಲೇ ಹರಡುವುದರಿಂದ ಮಣ್ಣಿನ ಫಲವತ್ತತೆ ಮತ್ತು ಅಂತರ್ಜಲ ಕೆಳಮಟ್ಟ ತಲುಪಲು ಬಿಡದೆ ಭೂಮಿಯನ್ನು ಬರಡುಮಾಡುತ್ತಿವೆ. ಸಸ್ಯಕಾಶಿ ಮಲೆನಾಡು ಬಯಲುಸೀಮೆ ಆಗುವಮುನ್ನ ಅಕೇಶಿಯ ಹೊರದಬ್ಬಲು ಪ್ರಯತ್ನಿಸಬೇಕಿದೆ.
Wednesday, 6 January 2021
Subscribe to:
Comments (Atom)
ಜೀವನ್ ಮೃತ್ಯು ! ಕೊರೊನ ನಡುವೆ ಬದುಕು ಹೇಗೆ
ಸ್ನೇಹಿತರೇ, ನಮಗೆ ತಿಳಿದಿರುವ ಹಾಗೇ ಈ ಜಗತ್ತಿನಲ್ಲಿ ನಾವು ಊಹೆಗೂ ನಿಲುಕಿಸದ ಪರಿಸ್ಥಿತಿ ಬಂದೊದಗಿದೆ. ಕಾಲವು ಚಲಿಸುತ್ತಲೇ ಇದೆ ಆದರೆ ಈ ಕಾಲವನ್ನು ಕಣ್ಣಿ...
-
ಸ್ನೇಹಿತರೇ, ನಮಗೆ ತಿಳಿದಿರುವ ಹಾಗೇ ಈ ಜಗತ್ತಿನಲ್ಲಿ ನಾವು ಊಹೆಗೂ ನಿಲುಕಿಸದ ಪರಿಸ್ಥಿತಿ ಬಂದೊದಗಿದೆ. ಕಾಲವು ಚಲಿಸುತ್ತಲೇ ಇದೆ ಆದರೆ ಈ ಕಾಲವನ್ನು ಕಣ್ಣಿ...
-
ಮಳೆಗಾಲದಲ್ಲಿ ಯಾವಾಗ ಅಂಗಡಿ ಕಟ್ಟೆಗಳು ಖಾಲಿ ಆಗಿ ಜನರಿಲ್ಲದೆ ನಿಶ್ಶಬ್ದವಾಗಿರುತ್ತದೆಯೋ ಅದರರ್ಥ ಮಲೆನಾಡಿನಲ್ಲಿ ಜನ ಕೃಷಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆ ಎಂದು....
-
ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ಸೂಚಿಸಿದ್ದು ಏಪ್ರಿಲ್ 6 ರಿಂದ 10 ರ ವರೆಗೆ ಅಲ್ಲಲ್ಲಿ ಮಳೆಯಾಗಲಿದೆ ಎಂದಿದ್ದಾರೆ. ಏಪ್ರಿಲ್ ...