ನಮ್ಮೂರ ಕಾಡುಗಳ ಈಗಾಗಲೇ ಆಕ್ರಮಿಸಿದ್ದಾಗಿದೆ ಈ ಅಕೇಶಿಯಾ , ಮಲೆನಾಡೆಂದರೆ ಅರಣ್ಯ , ಜೀವ ವೈವಿಧ್ಯತೆ , ಸಂಸ್ಕೃತಿ ಅಪಾರ ನೈಸರ್ಗಿಕ ಸಂಪತ್ತಿನ ಕಣಜ.
ನೆಲದಿಂದ ಹಿಡಿದು ಎತ್ತರದ ಮರಗಳವರೆಗೂವೈವಿಧ್ಯಮಯವಾದ ಗಿಡಮೂಲಿಕೆಗಳಂತಹ ಸಂಪತ್ತು ಈ ಮಣ್ಣಿನಲ್ಲಿ ಅಡಗಿದೆ ಅಕೇಶಿಯಾದಂತಹ ಈ ಸಸ್ಯ ಪ್ರಭೇಧಗಳು ಬೆಳೆಸುವುದರಿಂದ ಪರಿಸರದ ಮೇಲೆ ಹಾನಿಯುಂಟಾಗುತ್ತಿದೆ. ಕೇವಲ ಮೂರು ದಶಕಗಳಲ್ಲೇ ಹೀನಾಯ ಮಟ್ಟದಲ್ಲಿ ಅಂತರ್ಜಲ ತಗ್ಗಿಸಿರುವ ಈ ಸಸ್ಯಗಳು ಬೆಂಗಳೂರಿನಂತೆಯೇ ಮಲೆನಾಡಿಗೂ ಪೈಪ್ ಲೈನ್ ನಲ್ಲಿ ನೀರು ಬರುವಂತೆ ಮಾಡುವುದರಲ್ಲಿ ಸ್ವಲ್ಪಮಟ್ಟಿಗೆ ಯಶಸ್ವಿಯಾಗಿವೆ. ಅಕೇಶಿಯಾ ಮೂಲತಃ ಆಸ್ಟ್ರೇಲಿಯಾ ಇಂಡೋನೇಷಿಯಾದ ಗಿಡ ಈ ಅಕೇಶಿಯ ಪ್ಲಾಂಟೇಶನ್ ಗಳಲ್ಲಿ ಹುಲ್ಲು ಸಹ ಬೆಳೆಯುವುದಿಲ್ಲ ಹಕ್ಕಿ ಗೂಡುಕಟ್ಟುವುದಿಲ್ಲ ಇದು ನಮ್ಮ ಕಾಡಿಗೆ ಜೀವ ಸಂಕುಲಗಳಿಗೆ ಪೆಟ್ಟು ನೀಡುತ್ತಿದೆ. ಈ ಅಕೇಶಿಯಾ ಬೇರುಗಳು ಭೂಮಿಯ ಮೇಲ್ಪದರದಲ್ಲೇ ಹರಡುವುದರಿಂದ ಮಣ್ಣಿನ ಫಲವತ್ತತೆ ಮತ್ತು ಅಂತರ್ಜಲ ಕೆಳಮಟ್ಟ ತಲುಪಲು ಬಿಡದೆ ಭೂಮಿಯನ್ನು ಬರಡುಮಾಡುತ್ತಿವೆ. ಸಸ್ಯಕಾಶಿ ಮಲೆನಾಡು ಬಯಲುಸೀಮೆ ಆಗುವಮುನ್ನ ಅಕೇಶಿಯ ಹೊರದಬ್ಬಲು ಪ್ರಯತ್ನಿಸಬೇಕಿದೆ.
Wednesday, 6 January 2021
Subscribe to:
Posts (Atom)
ಜೀವನ್ ಮೃತ್ಯು ! ಕೊರೊನ ನಡುವೆ ಬದುಕು ಹೇಗೆ
ಸ್ನೇಹಿತರೇ, ನಮಗೆ ತಿಳಿದಿರುವ ಹಾಗೇ ಈ ಜಗತ್ತಿನಲ್ಲಿ ನಾವು ಊಹೆಗೂ ನಿಲುಕಿಸದ ಪರಿಸ್ಥಿತಿ ಬಂದೊದಗಿದೆ. ಕಾಲವು ಚಲಿಸುತ್ತಲೇ ಇದೆ ಆದರೆ ಈ ಕಾಲವನ್ನು ಕಣ್ಣಿ...

-
ದಟ್ಟ ಕಾಡು ,ಮನೆ ಮುಂದೆ ಜಮೀನು ಊರಿಗೊಂದೆ ಮನೆ ನೆರೆಮನೆ ನೋಡಬೇಕಾದರೆ ಮೈಲಿಗಟ್ಟಲೇ ದೂರ.ಗೋಡೆಯಿಲ್ಲದ ಮನೆಗಳು ಸಗಣಿಯ ನೆಲ ಮತ್ತು ಅಡಿಕೆಯ ಕೊನೆಮಟ್ಟೆ ಸುಟ್ಟು ಕರಿ ಉಂ...
-
ಜೂನ್ ಶುರು ಆಯ್ತು ಅಂದ್ರೆ ನಮ್ಮೂರಲ್ಲಿ ಮಳೆಯ ಸಿಂಚನ ಆರಂಭವಾಗುತ್ತೆ, ತುಂಗಾ ಮಾಲತಿ ಶರಾವತಿ ಧುಮ್ಮಿಕ್ಕಿ ಹರಿಯುವ ಕಾಲವದು.ರೈತರು ತಮ್ಮ ಕೃಷಿ ಚಟುವಟಿಕೆ ಗಳನ್ನು ಆರಂಭಿ...
-
ನೆನಪಿನ ಮನೆಯಲಿ ಒಂದು ಕೋಣೆ ತೆಗಿದಿದೆ. ನನ್ನ ಕರೆದಿದೆ,ಬಾಲ್ಯವ ತೆರೆದು ಕಣ್ಣಿಗೆ ಮುಸುಕು ಬಂದಿದೆ. ಮರೆತ ಮನವು ನೆನಪುಗಳೊಡನೆ ಸಾಗಿದೆ. ನಾ ತಿಳಿಯದೆ, ಬಾಲ್...