Saturday, 3 April 2021

ಕ್ರಿಕೆಟ್ ಅಭಿಮಾನಿಗಳಿಗೆ ಶಾಕ್ ! ಹೀಗಾದ್ರೆ ಐಪಿಎಲ್ ಕಥೆ ಮುಂದೇನು!!??

ಹೌದು ವಿಶ್ವದಲ್ಲೇ ಅತಿ ಶ್ರೀಮಂತಿಕೆಯ ಹಾಗೂ ವರ್ಣರಂಜಿತ ಕ್ರಿಕೆಟ್ ಟೂರ್ನಮೆಂಟ್ ಗಳ ಅಗ್ರಸ್ಥಾನದಲ್ಲಿ ನಮ್ಮೆಲ್ಲರ ತರ್ಕಕ್ಕೆ ಬರುವುದು ಐಪಿಎಲ್, ಇನ್ನೇನು ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇರುವಾಗಲೇ ಶಾಕ್ ಮೇಲೆ 
ಶಾಕ್!! ಐಪಿಎಲ್ ಗೆ ವಿಘ್ನ ಎದುರಾಗಿದೆ. ಎರಡು ದಿನಗಳ ಹಿಂದಷ್ಟೇ ಕ್ರಿಕೆಟ್ ಗಾಡ್ ಸಚಿನ್ ಕೊರೊನ ಸೋಂಕಿಗೆ ಒಳಗಾಗಿದ್ದ ಸುದ್ದಿ ಕೇಳಿದ್ದೆವು ಇದೀಗ ಡೆಲ್ಲಿ ಕ್ಯಾಪಿಟಲ್ ತಂಡದ ಸಹ ಆಟಗಾರ  ಅಕ್ಷರ್ ಪಟೇಲ್ ಗು ಸೋಂಕು ತಗುಲಿದ್ದು ಆರಂಭದಲ್ಲೇ ವಿಘ್ನ ಎದುರಾಗಿದೆ.
ವಾಂಖೆಡೆ ಸ್ಟೇಡಿಯಂ ನ 16 ಮಂದಿ ಕೆಲಸ ನಿರ್ವಾಹಕರಿಗೂ ಸೋಂಕು ತಗುಲಿದ್ದು ಐಸೋಲೇಶನ್ ನಲ್ಲಿರಿಸಲಾಗಿದೆ, ಈಗ ಕೊರೊನ ಐಪಿಎಲ್ ಮೇಲೆ ದಾಳಿ ಮಾಡುವುದಾಗಿ ಸೂಚನೆ ರವಾನಿಸಿದೆ.
ಚೆನ್ನೈ ತಂಡದಲ್ಲೂ ಕೇಸ್‌!!
ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಸದಸ್ಯರೊಬ್ಬರಿಗೆ ಕೊರೊನಾ ತಗುಲಿರುವುದು ವರದಿಯಾಗಿದೆ. ಸಿಎಸ್‌ಕೆಯ ತಾಂತ್ರಿಕ ವಿಭಾಗದ ಸದಸ್ಯರೊಬ್ಬರಲ್ಲಿ ಪಾಸಿಟಿವ್‌ ಕಂಡುಬಂದಿದೆ. ಸೋಂಕಿತ ವ್ಯಕ್ತಿ ಯಾವುದೇ ಆಟಗಾರರ ಅಥವಾ ತಂಡ ಸಿಬಂದಿಯ ಸಂಪರ್ಕ ಹೊಂದಿಲ್ಲ ಎಂದು ಸಿಎಸ್‌ಕೆ ಪ್ರಾಂಚೈಸಿ ಖಾತ್ರಿಪಡಿಸಿದೆ.

ಮತ್ತೆ ದೇಶಾದ್ಯಂತ ಕೊರೊನ 2ನೆ ಅಲೆ ಸ್ಫೋಟಗೊಂಡಿದ್ದು ದೇಶದ ಜನರಲ್ಲಿ ಮತ್ತು ಕ್ರಿಕೆಟ್ ಅಭಿಮಾನಿಗಳಲ್ಲಿ ಆತಂಕ ಹೆಚ್ಚಾಗಿದೆ.

ಅಪ್ಪು ಫ್ಯಾನ್ಸ್ ಆತಂಕ!! ಯುವರತ್ನ!! ಕೋರೊನ!! ಸರ್ಕಾರ!???

ಏಪ್ರಿಲ್ ಒಂದರಂದು ಪವರ್ ಸ್ಟಾರ್ ಪುನಿತ್ ರಾಜ್ ಕುಮಾರ್ ಅಭಿನಯದ ಯುವರತ್ನ ತೆರೆಕಂಡಿದ್ದು, ಎಲ್ಲೆಡೆ ಅತೀ ಉತ್ತಮ ಪ್ರತಿಕ್ರಿಯೆ ಪಡೆದಿದ್ದು ಕೊರೊನ ಕಾರಣದದಿಂದ ಕೊಂಚ ಹಿನ್ನಡೆ ಅನುಭವಿಸಿದ್ದ ಚಿತ್ರೋದ್ಯಮ ಈಗ  ಕೊಂಚ ವೇಗ ಕಂಡುಕೊಂಡ ಸಮಯದಲ್ಲೇ ಮತ್ತೆ ರಾಜ್ಯದಲ್ಲಿ ಕೊರೊನಾರ್ಭಟ ಹೆಚ್ಚಾದ ಕಾರಣ ನಿನ್ನೆ ಸರ್ಕಾರ ಮತ್ತೆ ಚಿತ್ರಮಂದಿರದ ಸೀಟುಗಳ ಭರ್ತಿ ಕೇವಲ 50 ಪ್ರತಿಶತಕ್ಕೆ ಇಳಿಸಾಲಾಗಿತ್ತು.  ಎಲ್ಲೆಡೆ ಅಸಮಾಧಾನ ಹೊರ ಹಾಕಿದ್ದರು. ಶಿವರಾಜ್ ಕುಮಾರ್ ಮತ್ತು ನಾಗತಿಹಳ್ಳಿ ಚಂದ್ರ ಶೇಖರ್ ಸರ್ಕಾರದ ನಿರ್ಧಾರವನ್ನು ಟ್ವಿಟರ್ ನಲ್ಲಿ  ವಣಿಜ್ಯ ಮಂಡಳಿಯ ಮನವಿಯನ್ನು ಸ್ವೀಕರಿಸಿರುವ ಸರ್ಕಾರ ಏಪ್ರಿಲ್ 7 ರ ವರೆಗೆ ನಿರ್ಬಂಧ ಸಡಿಲಿಕೆ ಮಾಡಿದೆ. ಈ ಮೂಲಕ ಮೂರು ದಿನಗಳ ಕಾಲ ನಿರ್ಬಂಧ ಸಡಿಲಿಕೆ ಮಾಡಿರುವ ಸರ್ಕಾರ, ಏಪ್ರಿಲ್ 6 ರ ಮಧ್ಯರಾತ್ರಿವರೆಗೆ ನಿರ್ಬಂಧ ಸಡಿಲಿಕೆ ಮಾಡಿದೆ. 
ಸದ್ಯ ಸರ್ಕಾರದ ಈ ನಿರ್ಧಾರದಿಂದ ಅಪ್ಪು ಅಭಿಮಾನಿಗಳು ಹಾಗೂ ಚಿತ್ರಪ್ರೇಮಿಗಳು ಕೊಂಚ ನಿರಾಳರಾಗಿದ್ದಾರೆ.

Friday, 2 April 2021

ಕನ್ನಡಿಗರ ಹೃದಯ ಗೆದ್ದ ಅಪ್ಪು! ಶೇಕಡ 99 ರಷ್ಟು ಸ್ವಚ್ಛ ಸಿನಿಮಾ : ಯುವರತ್ನ!!

ಏಪ್ರಿಲ್ 1 ಕ್ಕೆ ರಾಜ್ಯಾದ್ಯಂತ ತೆರೆಗೆ ಅಪ್ಪಳಿಸಿರುವ ಸಂತೋಷ್ ಆನಂದ್ ರಾಮ್ ನಿರ್ದೇಶನದ ಪುನೀತ್  ರಾಜ್ ಕುಮಾರ್  ಪ್ರಕಾಶ್ ರೈ ಅಚ್ಯುತ್ ಕುಮಾರ್ ಪ್ರಕಾಶ್ ಬೆಳವಾಡಿ ಸಯೇಶ ಕಲಾವಿದರ ದಂಡೇ ಅಭಿನಯಿಸಿರುವಂತ ಯುವರತ್ನ ಚಿತ್ರ  ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ದೊರೆತಿದ್ದು ಮತ್ತೊಮ್ಮೆ ಪುನೀತ್ ರ ಖಾತೆ ಇಂಡಸ್ಟ್ರಿ ಹಿಟ್ ಸೇರುವುದು ಖಚಿತ. 

ಒಂದೊಳ್ಳೆ ಸಂದೇಶ ಹೊತ್ತು ತಂದಿರುವ ಈ ಚಿತ್ರ ವಿದ್ಯಾರ್ಥಿ ಜೀವನದಲ್ಲಿ ಓದಿನ ಜೊತೆಗೆ  ಕಲೆ ಸಾಹಿತ್ಯ ಕ್ರೀಡೆಗಳು ಜೀವನ ರೂಪಿಸುತ್ತವೆ ವಿದ್ಯಾರ್ಥಿಗಳ ಆಸಕ್ತಿಗೆ ಬೆಂಬಲ ಕೊಡಬೇಕು ಅನ್ನುವುದರ ಜೊತೆಗೆ  ಹೇಗೆ ಖಾಸಗಿ ಶಿಕ್ಷಣ ಸಂಸ್ಥೆಗಳು ಶಿಕ್ಷಣವನ್ನ ವ್ಯಾಪಾರಿಕರಣ ಗೊಳಿಸಿವೆ ಎನ್ನುವುದನ್ನ ತೋರಿಸುತ್ತ  ವಿದ್ಯಾರ್ಥಿಗಳು ಹೇಗೆ drugs ಗೆ ಅಡಿಕ್ಟ್ ಆಗ್ತಾ ಇದಾರೆ ಎನ್ನುವುದನ್ನ ಎಳೆ ಎಳೆಯಾಗಿ ಹೇಳ್ತಾ ಗುರುವಿನ ಮಹತ್ವ ತಿಳಿಸುತ್ತಾ ಹೋಗುತ್ತದೇ.

ಹೀರೊ ಸರ್ಕಾರಿ ಕಾಲೇಜನ್ನ ಉಳಿಸುವ ಸಲುವಾಗಿ ಹೇಗೆ ವ್ಯವಸ್ಥೆಯ ವಿರುದ್ದ ಹೊರಡುತ್ತಾನೆ ಎನ್ನುವುದೇ ಒಂದೆಳೆ ಕಥೆ ಹಾಗೆ ಇಲ್ಲಿ ಪುನೀತ್ ಜೊತೆಗೆ ಮತ್ತೊಬ್ಬ ಹೀರೊ ಇದ್ದು ಅವರೇ ಪ್ರಕಾಶ್ ರಾಜ್ ತಮ್ಮ ಅಮೋಘ ಅಭಿನಯದಿಂದ ಎಲ್ಲರ ಮನಸ್ಸು ಗೆಲ್ಲುವುದರಲ್ಲಿ ಸಂಶಯವಿಲ್ಲ. ಹೀರೋಯಿನ್ ಸಯೇಶ ಪಾತ್ರ ಚೆನ್ನಾಗಿದ್ದು ಅಂತಹದ್ದೇನು ಮಹತ್ವತೆ ಪಾತ್ರಕಿಲ್ಲ..ತಮನ್ ಉತ್ತಮ ಸಂಗೀತ ನೀಡಿದ್ದು ಚಿತ್ರದ್ದುದ್ದಕ್ಕೂ ಪ್ರೇಕ್ಷಕರರನ್ನ ಹಿಡಿದು ಕೂರಿಸುತ್ತದೆ . ಅಲ್ಲಲ್ಲಿ ಶಿವಾರಾಜ್ ಕುಮಾರ್ ರೆಫರ್ನ್ಸ್ ರಾಜಕುಮಾರ್ ರೆಫರೆನ್ಸ್ ಇರೋ ಡೈಲಾಗ್ ಗಳು  ಶಿಳ್ಳೆ ಗಿಟ್ಟಿಸಿಕೊಳ್ಳುತ್ತವೆ. 

ನೀವೊಬ್ಬರು 
 ಉತ್ತಮ ಸಂದೇಶವುಳ್ಳ ಕುಟುಂಬ ಸಮೇತರಾಗಿ ನೋಡಬಹುದಂತಹ ಯಾವುದೇ ನಾನ್ ವೆಜ್ ಜೋಕ್ ಗಳು ಇಲ್ಲದಂತ ಫ್ಯಾಮಿಲಿ ಪ್ಯಾಕೇಜ್ ಸಿನಿಮಾದ ಪ್ರೇಮಿಗಳಾಗಿದ್ದರೆ ಇನ್ನೇಕೆ ತಡ  .....



#Sanketha Gm Thirthahalli

Wednesday, 6 January 2021

ಮಲೆನಾಡಿಗೆ ಅಕೇಶಿಯಾ ಬೇಡ

ನಮ್ಮೂರ ಕಾಡುಗಳ ಈಗಾಗಲೇ ಆಕ್ರಮಿಸಿದ್ದಾಗಿದೆ ಈ ಅಕೇಶಿಯಾ , ಮಲೆನಾಡೆಂದರೆ ಅರಣ್ಯ , ಜೀವ ವೈವಿಧ್ಯತೆ , ಸಂಸ್ಕೃತಿ ಅಪಾರ ನೈಸರ್ಗಿಕ ಸಂಪತ್ತಿನ ಕಣಜ.
ನೆಲದಿಂದ ಹಿಡಿದು ಎತ್ತರದ ಮರಗಳವರೆಗೂವೈವಿಧ್ಯಮಯವಾದ ಗಿಡಮೂಲಿಕೆಗಳಂತಹ ಸಂಪತ್ತು ಈ ಮಣ್ಣಿನಲ್ಲಿ ಅಡಗಿದೆ ಅಕೇಶಿಯಾದಂತಹ ಈ ಸಸ್ಯ ಪ್ರಭೇಧಗಳು ಬೆಳೆಸುವುದರಿಂದ ಪರಿಸರದ ಮೇಲೆ ಹಾನಿಯುಂಟಾಗುತ್ತಿದೆ. ಕೇವಲ ಮೂರು ದಶಕಗಳಲ್ಲೇ ಹೀನಾಯ ಮಟ್ಟದಲ್ಲಿ ಅಂತರ್ಜಲ ತಗ್ಗಿಸಿರುವ ಈ ಸಸ್ಯಗಳು ಬೆಂಗಳೂರಿನಂತೆಯೇ ಮಲೆನಾಡಿಗೂ ಪೈಪ್ ಲೈನ್ ನಲ್ಲಿ ನೀರು ಬರುವಂತೆ ಮಾಡುವುದರಲ್ಲಿ ಸ್ವಲ್ಪಮಟ್ಟಿಗೆ ಯಶಸ್ವಿಯಾಗಿವೆ. ಅಕೇಶಿಯಾ ಮೂಲತಃ ಆಸ್ಟ್ರೇಲಿಯಾ ಇಂಡೋನೇಷಿಯಾದ ಗಿಡ ಈ ಅಕೇಶಿಯ ಪ್ಲಾಂಟೇಶನ್ ಗಳಲ್ಲಿ ಹುಲ್ಲು ಸಹ ಬೆಳೆಯುವುದಿಲ್ಲ ಹಕ್ಕಿ ಗೂಡುಕಟ್ಟುವುದಿಲ್ಲ ಇದು ನಮ್ಮ ಕಾಡಿಗೆ ಜೀವ ಸಂಕುಲಗಳಿಗೆ ಪೆಟ್ಟು ನೀಡುತ್ತಿದೆ. ಈ ಅಕೇಶಿಯಾ ಬೇರುಗಳು ಭೂಮಿಯ ಮೇಲ್ಪದರದಲ್ಲೇ ಹರಡುವುದರಿಂದ ಮಣ್ಣಿನ ಫಲವತ್ತತೆ ಮತ್ತು ಅಂತರ್ಜಲ ಕೆಳಮಟ್ಟ ತಲುಪಲು ಬಿಡದೆ ಭೂಮಿಯನ್ನು ಬರಡುಮಾಡುತ್ತಿವೆ. ಸಸ್ಯಕಾಶಿ ಮಲೆನಾಡು ಬಯಲುಸೀಮೆ ಆಗುವಮುನ್ನ ಅಕೇಶಿಯ ಹೊರದಬ್ಬಲು ಪ್ರಯತ್ನಿಸಬೇಕಿದೆ.

Wednesday, 21 August 2019

ಆರಗ ಜ್ಞಾನೇಂದ್ರ , ನಿಮ್ಮ ನಂಬಿ ವೋಟ್ ಹಾಕಿದ್ದ ನಮಗೆ ಮೋಸ ಮಾಡಿ ಬಿಟ್ಟಿರಲ್ಲ.
ಈ ಬಾರಿ ನೀವು ಮಂತ್ರಿ ಆಗಿಯೇ ಆಗುತ್ತಿರಿ ಪಕ್ಷದಲ್ಲಿ ಅಷ್ಟು ಪ್ರಬಲರು  ಎಂದು ಕೊ0ಡಿದ್ದೇವಲ್ಲ ,.. ನಿಮ್ಮನ್ನ ನಂಬಿ ನಾವು ಕೆಟ್ಟೆವಲ್ಲ..
 ನೀವು ಈ ಎಲ್ಲ ನಡುವಳಿಕೆ ಮಾಡಬೇಕಿತ್ತು ಆಗ ನಿಮಗೆ ಪಕ್ಷದಲ್ಲಿ ಸಚಿವ ಸ್ಥಾನ ಸಿಗುತ್ತಿತ್ತು..
ಇಲ್ಲ ಸಲ್ಲದನ್ನು ಮೈ ಮೇಲೆ ಹಾಕಿಕೊಂಡು ದಿನಕ್ಕೊಂದು ಬುಕಾಳಿ ಕಾಮೆಂಟ್ tv ಮುಂದೆ ಹೊಡಿಯಬೇಕಿತ್ತು..
ಯಾವಾಗಲೂ ರೆಬೆಲ್ ಅತೃಪ್ತರಾಗಿದ್ದಂತೆ ತೋರಿಸಿ ಕೊಳ್ಳ ಬೇಕಿತ್ತು..
ಭ್ರಷ್ಟಾಚಾರ ಮನೆ ಮರುಕು ತಲೆ  ಹಿಡುಕ ಕೆಲಸಗಳನ್ನ ಮಾಡಿ ಸದಾ ಮಾಧ್ಯಮಗಳಲ್ಲಿ ದಿನ ಕಾಣಿಸಿಕೊಳ್ಳ ಬೇಕಿತ್ತು.
ಒಂದೇ ಪಕ್ಷಕ್ಕಾಗಿ ಸುಮಾರು 45 ವರ್ಷಗಳ ಕಾಲ ಜೀತದಾಳುವಿನಂತೆ ದುಡಿದಿದ್ದರಲ್ಲ ಅದು ನಿಮ್ಮ ಮೂರ್ಖತನ ದಿನಕ್ಕೊಂದು ಪಕ್ಷ ಲಾಭಕ್ಕಾಗಿ ಹವಣಿಸ ಬೇಕಿತ್ತು..
ಹಗರಣಗಳಲ್ಲಿ ನಿಮ್ಮದು ಒಂದು ಸಿಂಹ ಪಾಲು ಯಾವಾಗ್ಲೂ ಇರಬೇಕಿತ್ತು..
ದೊಡ್ಡ ದೊಡ್ಡ (ನಿಮ್ಮ ಮುಂದೆ ಬಚ್ಚಗಳು ಹಗರಣ ಹಾಳು ಮೂಳು ಮಾಡಿ ಬೇವರ್ಸಿ ಮಾಧ್ಯಮಗಳಿಂದ ದೊಡ್ಡವರಾದವರು) ಅವರುಗಳ ಬಳಿ ಹಿಂದೆ ಮುಂದೆ ದಿನ ಪ್ರತಿ ಕ್ಷೇತ್ರ ಬಿಟ್ಟು ಓಡಾಡಲು ನಿಮಗೆ ಆಗಲಿಲ್ಲ..ಬಕೆಟ್ ರಾಜಕಾರಣ ಮಾಡಲು ನಿಮಗೆ ಬರಲಿಲ್ಲ.
ಕೋಟಿ ಒಡೆಯರು ಕೋಟಿ ಕಾರುಗಳನ್ನು ಇಟ್ಟು ಶೋಕಿ ಮಾಡಲು ನಿಮಗೆ ಆಗಲಿಲ್ಲ.. ಕುಟುಂಬ ರಾಜಕಾರಣ ಮಾಡಿ  ಸಂಖ್ಯಾ ಬಲ ನನ್ನದು ಇಷ್ಟಿದೆ ಎಂದು ಹೇಳಿಕೊಳ್ಳುವವರು ನಿವಲ್ಲ..
ರೇಬಲ್ ಅಲ್ಲ , ಮೋಸ ಹೊಂಚುಗಾರನಲ್ಲ ,  ಉಂಡ ಮನೆಗೆ ಯಡಿಯೂರಪ್ಪ ನಂತೆ 2 ಬಗೆದವರಲ್ಲ .. ಇಂತ ಎಲ್ಲ ಗುಣಗಳು ಇಲ್ಲದಿದ್ದ ಮೇಲೆ ನಿಮ್ಮನ್ನು ನಂಬಿ ಮತ ನೀಡಿದ್ದೇವಲ್ಲ ಈ ಬಾರಿ ಮಂತ್ರಿ ಆಗುತ್ತಿರಿ ಎಂದು  ನೀವು ಮೋಸ ಮಾಡಿ ಬಿಟ್ಟಿರಿ ಇನ್ನು ಮುಂದೆ ಈ ಮೇಲಿನ ಗುಣಗಳ ನಿಮ್ಮದಾಗಿರಿಸಿ ಕೊಳ್ಳಿ ಖಂಡಿತ ಸಚಿವ ರಾಗುವಿರಿ..
           - RIGHT WING KANNADA

Tuesday, 20 August 2019

ಭತ್ತದ ಬದುಕು ಸಾದ್ಯವಿಲ್ಲ












      ಮಳೆಗಾಲದಲ್ಲಿ ಯಾವಾಗ ಅಂಗಡಿ ಕಟ್ಟೆಗಳು ಖಾಲಿ ಆಗಿ ಜನರಿಲ್ಲದೆ ನಿಶ್ಶಬ್ದವಾಗಿರುತ್ತದೆಯೋ ಅದರರ್ಥ ಮಲೆನಾಡಿನಲ್ಲಿ ಜನ ಕೃಷಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆ ಎಂದು.. 
ಮಲೆನಾಡಿನಲ್ಲಿ ಅಡಿಕೆ ಬೆಳೆಗಾರರ ಜೀವನ ಸ್ವಲ್ಪ ಸಮಯದ ಹಿಂದೆ ಉತ್ತಮವಾಗಿತ್ತು ಆದ್ರೆ ಈಗ ಅವರ ಪರಿಸ್ಥಿತಿಯು ಹದಗೆಟ್ಟಿದೆ ಆದ್ರೆ ಭತ್ತ ಬೆಳೆಯುವವರಿಗಿಂತ ಏನು ಹದಗೆಟ್ಟಿಲ್ಲ. ನಾವೆಲ್ಲ ನೋಡಿದ್ದೇವೆ  ರಸ್ತೆ ಬದಿಯ ಗದ್ದೆಗಳು ನಿವೇಶಗಳು ಶಾಪಿಂಗ್ ಮಾಲ್ ಗಳು ಆದ್ರೆ  , ಇನ್ನು  ಮಕ್ಕಿ ಗದ್ದೆಗಳು  ತೋಟಗಳು , ನೀಲಗಿರಿ ಅಕೇಶಿಯ ಪ್ಲಾಂಟೇಶನ್ ಗಳಾಗಿ ಬದಲಾಗುತ್ತಿವೆ.ಹಾಗದರೆ  ಭತ್ತ ಬೆಳೆಯುವವರು ಹಿಂದೇಟು ಹಾಕಲು ಗದ್ದೆಗಳನ್ನ ಹಾಳು ಬಿಡಲು ಕಾರಣವನ್ನು ಹುಡುಕುತ್ತ ಹೊರಟರೆ ಸಿಗುವ ಕಾರಣಗಳು ಹಲಾವಾರು ಆದರೆ ಅವೆಲ್ಲ ಕಾರಣಗಳಲ್ಲಿ  ಉಳಿದಿರುವ  ಒಂದೇ ಸತ್ಯ ಲಾಭವೇ ಇಲ್ಲ  , ಮೂರು ಹೊತ್ತು ಉಣ್ಣಲು ಭತ್ತ ಮನೆಯ ಕಣಜದಲ್ಲಿ ಇರುತ್ತದೆ ಹೊರತು ಬೇರೇನೂ ಲಾಭವೂ ಇಲ್ಲ..
ಭತ್ತ ಬೆಳೆಯುವ ರೈತರು ಇಂದು ಶ್ರೀಮಂತರಾಗಿ ಉಳಿದಿಲ್ಲ , ಇಂದು ಭತ್ತ ಬೆಳೆಯುವ ರೈತರು ಅದರಲ್ಲೂ ಮಲೆನಾಡಿನ ಭಾಗದಲ್ಲಿ ಬಡವರು ಮಾತ್ರ, ಯಾರಿಗೆ ಹೊಳೆಯಿಂದ ನೀರು ತರುವ ಶಕ್ತಿಇಲ್ಲವೋ , ಯಾರಿಗೆ ಬೋರ್ವೆಲ್ ಹೊಡೆಸಿ ನೀರು ತಂದು ತೋಟ ಮಾಡುವ ಶಕ್ತಿ ಇಲ್ಲವೋ  ಇಂತವರು ಇನ್ನು  ಗದ್ದೆಯನ್ನು ಇಟ್ಟುಕೊಂಡಿದ್ದರೋ ಹೊರತು ,  ಆರ್ಥಿಕವಾಗಿ ಸದೃಢ ಇದ್ದವರು ಕಾಡು ಗದ್ದೆ ಸಾಯಲಿ ಕಾಡು ಗುಡ್ಡವನ್ನು ಒಳ ಹಾಕಿ  ತೋಟ ಮಾಡಿದ್ದಾರೆ. ಭತ್ತ ಬೆಳೆಯುವವರ  ಪರಿಸ್ಥಿತಿ ಎಷ್ಟು ಹೀನಾಯವಾಗಿದೆ ಎಂದರೆ  ನಾನು ಹೇಳುವ ಬದಲು ನೀವೇ ಮುಂದೆ ಈ ಲೇಖನ ಓದಿದರೆ ಮನಸಲ್ಲಿ ಹೀಗೊಂದು ಯೋಚನೆ ಬರದೆ ಇರದು ಕೂಲಿ ಮಾಡಿದರೆ ಉತ್ತಮ ಜೀವನವಿದೆ ಎಂದು.

     ನೀವು ಯೋಚಿಸಿರ ಬಹುದು ಬರೀ ಕಷ್ಟ ಕಷ್ಟ ಎಂತಾ ಹೇಳುತ್ತಲೇ ಹೋಗುತ್ತಿದ್ದಾನೆ ಈ ಲೇಖಕ  ಹಾಗಾದ್ರೆ ಏನು ಕಷ್ಟಗಳೆಂದು ಅದಕ್ಕಾಗಿ ಸಣ್ಣ ಲೆಕ್ಕಾಚಾರ ನಿಮ್ಮ ಮುಂದೆ .

  ಮೂರು ಏಕರ್ರೆ ಗದ್ದೆಗೆ (ಕೆಲಸಕ್ಕೆ ಬಂದವರ ಊಟ ತಿಂಡಿಗಳನ್ನು ಇನ್ನಿತರ ಸಣ್ಣ ಪುಟ್ಟ ಖರ್ಚುಗಳನ್ನು ಬಿಟ್ಟು)

ಗದ್ದೆ ಹೊಳ್ಕೆ ಗೆ  ಟ್ರಾಕ್ಟರ್ಗೆ - 3000 ಸಾವಿರ.
ಸಸಿ ಹಾಕಲು ಆಳು ಮತ್ತು ಹೂಟಿಗೆ - 2500 ರೂಪಾಯಿಗಳು.
ಅಂಚು ಕಡಿಯಲು ಕನಿಷ್ಠ 5 ಆಳಿಗೆ  - 2500ರೂಪಾಯಿಗಳು
ಗದ್ದೆ ನೆಟ್ಟಿಗೆ ಆಳಿಗೆ- 2700ಪ್ರತಿ ಎಕರೆಗೆ *3 ಎಕರೆ = 7100ರೂಪಾಯಿಗಳು
ಗದ್ದೆ ಹೂಟಿ = ಪ್ರತಿ ಗಂಟೆಗೆ 650 *ಕನಿಷ್ಠ ಘಂಟೆಗೆ = 5200
ಗದ್ದೆಗೆ ಗೊಬ್ಬರ = 3 ಮೂಟೆ = 1300*3 = 3900
ಗದ್ದೆಗೆ ಔಷಧಿ = 1000
ಗದ್ದೆ ಕಳೆ ತಗಿಯಲು = 5 ಆಳು ನಾವೇ ಕೆಲ್ಸ ಮಾಡಿದ್ರು ಬೆಲೆ ಉಂಟಾಲ್ಲ ಶ್ರಮಕ್ಕೆ = 250*5= 1250
ಗದ್ದೆ ಕೊಯ್ಲು = 20 ಆಳು * 350=7000
ಗದ್ದೆ ಹೊರೆ = 14 ಆಳು *350=  4900
ಒಕ್ಕಲಾಟ = 8000
ಕೆಲ್ಸದವ್ರಿಗೆ ಊಟ ಎಲ್ಲ ಬಿಟ್ಟು ಖರ್ಚು 43850
ಭತ್ತ ಮಾರಿದಾಗ ಸಿಗುವುದು 
25 quintal * 1200 = 32500
ಹುಲ್ಲು ಮಾರಿದ್ರೆ ಒಂದು 15000
ಒಟ್ಟು 47500
-         43850
ಒಟ್ಟು  ಲಾಭ .3650 .  ಸಾಕ ಒಬ್ಬ ಜೀವನ ನಡೆಸೋದಕ್ಕೆ ಸಾದ್ಯವ ಈ ಗದ್ದೆ ನಂಬಿ ಮಲೆನಾಡಿನಲ್ಲಿ..  ..
3650 ಅಂದ್ರೆ ದಿನಕ್ಕೆ  10 ರೂಪಾಯಿ.. ಬದುಕೊಕೇ ಆಗುತ್ತಾ.. (ಗದ್ದೆಗೆ ಒಡ್ಡು ಬೇಲಿ ಮಾಡಿದೆಲ್ಲವನ್ನು ಬಿಟ್ಟು )
      ಗದ್ದೆ ಭತ್ತದ ಕೃಷಿ ಮಾಡಿ ಸದೃಢ ಜೀವನ ಮಾಡಲಿಕ್ಕಂತೂ ಸಾಧ್ಯವಿಲ್ಲ.. ದಿನಕ್ಕೆ ಹತ್ತು ರೂಪಾಯಿ ಅಂದ್ರೆ ಭಿಕ್ಷುಕನಿಗಿಂತಲು ಸಣ್ಣ ಮಟ್ಟದ ಜೀವನ.. ಆದ್ದರಿಂದಲೇ ಇಂದು  ಸಾಕಷ್ಟು ಭತ್ತ ಬೆಳೆಗಾರರು ಕೂಲಿಯನ್ನ ಅವಲಂಬಿಸಿದ್ದಾರೆ.. ಇಲ್ಲ ಅಂದ್ರೆ ಹೇಗೆ ಬದುಕಬೇಕು ಹೇಳಿ ವಿದ್ಯಾಭ್ಯಾಸ , ಸಂತೆ ಸಾಮಾನು ಇನ್ನು ಹಲವಾರಕ್ಕೆ ಕೂಲಿಯೇ ಆಧಾರ..  
      ಪ್ರಸ್ತಕ ಈ ಭಾರಿಯಂತೂ ಜನ ತಲೆಯೇತ್ತುವ ಪರಿಸ್ಥಿತಿಯಲ್ಲಿಯೇ ಇಲ್ಲ ನೆರೆ ಬಂದು ನೆಟ್ಟಿದ್ದ ಗದ್ದೆಗಳು  ನೆಲ ಕಚ್ಚಿವೆ , ಕೆಲವರು ಈ ವರ್ಷದ ಫಸಲಿನ ಆಸೆಯೇ ಬಿಟ್ಟರೆ ಇನ್ನೂ ಹಲವಾರು ಹಲವಾರು ಕಡೆ ಸಸಿ ಹುಡುಕಿ ಮತ್ತೆ ನಟ್ಟಿ ಮಾಡಲು ಶುರು ಮಾಡಿದ್ದಾರೆ. ಹೀಗಿರುವಾಗ ಸರ್ಕಾರ ಸೂಕ್ತ ಪರಿಹಾರ ನೀಡಿದರೆ ಬಡವರಿಗೆ ಸ್ವಲ್ಪ ಸಹಾಯವಾಗ ಬಹುದು , ಬಂದ ಪರಿಹಾರವು ನೂರ ಎಂಟು ಗಿಡುಗ ಹದ್ದು ಗಳು ನುಂಗಿ ಎಕರೆ ಇನ್ನೂರು ಮುನ್ನೂರು ಕೊಡುವ ಬದಲು ಹಾಗೆ ಇದ್ದರೆ ಒಳ್ಳೆಯದು  ಎನ್ನುವುದು ನನ್ನ ಭಾವನೆ.  ನಮ್ಮ ಜನರು ಅದರಲ್ಲೂ ಭತ್ತ ನಂಬಿ ಬದುಕುವವರು ಬಡವರು  ಭತ್ತ ಬೆಳೆದು ಬದುಕೊಕೇ ಸಾಧ್ಯವಿಲ್ಲ ತೋಟ ಮಾಡಲು ಹಣವಿಲ್ಲ ಭತ್ತ ಬೆಳೆಯುವವರು ಬಡವರು..
         - ಸಂಕೇತ ಜಿ ಎಂ ತೀರ್ಥಹಳ್ಳಿ









Wednesday, 15 May 2019

ಮಲೆನಾಡು ಅಂದರೆ ಒಮ್ಮೆಲೇ ಕಣ್ಣು ಮುಂದೆ ಕಂಪಿಸೋದು    ಮಳೆ  ಹಸಿರಿನ ದಟ್ಟ ಕಾಡುಗಳು ವಿಪರೀತವಾದಂತಹ ಮಳೆ ಅಷ್ಟೇನಾ ಮಲೆನಾಡು ಅಲ್ಲವೇ ಅಲ್ಲ ವಿವಿಧ ಸಂಸ್ಕೃತಿ  ಆಚರಣೆಗಳು ಹೊಸ್ತಿನ ಮನೆ ,ದಯ್ದರ್ಕ್ಕೆ . ಮಾಲಾಯ, ಇಂತಹ ಎಷ್ಟೋ ಆಚರಣೆಗಳು ಸಹ ಇವೆ.ಹೇಳಿದ್ದೆ ಎಷ್ಟು ಬಾರಿ ಹೇಳೋದು ಮಾದ್ಯಮಗಳಂತೂ ಮಲೆನಾಡನ್ನು ಶಾಂತವೇರಿ ಗೋಪಾಲಗೌಡರ ಸಮಾಜವಾದಿ ನೆಲವೆಂದು ಬಣ್ಣಿಸುವರು. ಇಂತಹ ಮಲೆನಾಡಲ್ಲಿ ಇಂದು ಭತ್ತದ ಗದ್ದೆಗಳೆಲ್ಲ ದುರ್ಭಿನು ಹಾಕಿ ಹುಡುಕುವ ಹಂತಕ್ಕೆ ಬಂದು ತಲುಪಿವೆ. ರಸ್ತೆಗಳಿಗೆ ಹತ್ತಿರವಾಗಿ ಇದ್ದ ಗದ್ದೆಗಳು layout ಗಳಾಗಿ ನಿವೇಷನಗಳಾಗಿ ಬದಲಾವಣೆಯಾಗಿ ವಾಣಿಜ್ಯ ಉದ್ದೇಶಗಳಿಗೆ  ಮಾರ್ಪಾಡದರೆ, ಗದ್ದೆಗಳು ನೀಲಗಿರಿ , ಅಕೇಶಿಯ, ಅಡಿಕೆ ತೋಟಗಳಾಗಿ ರೂಪುಗೊಂಡಿವೆ.ಇನ್ನೂ ಉಳಿದ ಗದ್ದೆಗಳಲ್ಲಿ ಭತ್ತ ನಾಟಿ ಇದ್ದರು ಹಿಂದಿದ್ದ ಕಳೆ ಖುಷಿ ಇಲ್ಲ, ಗಾಜನೂರು ಆಳುಗಳೊ , ಇನ್ನಿತರ ನವನವೀನ ಯಂತ್ರೋಪಕರಣಗಳ ಸಹಾಯದಿಂದ ಒಂದೋ ಎರಡೋ ದಿನಕ್ಕೆ  ಗದ್ದೆ ನಟ್ಟಿ ಮುಗಿದು ಜನ ಮನೆ ಸೇರುತ್ತಾರೆ. 
       ಆದ್ರೆ ಮೊದಲು ಹೀಗಿರಲಿಲ್ಲ ,  ಗದ್ದೆ ನಟ್ಟಿಯ ಮೊದಲ ಹಂತ   ಶುರು ಆಗ್ತಿದ್ದಿದ್ದು ಜೂನ್ ಶುರುವಿನಲ್ಲಿ ಮೊದಲ ಮುಂಗಾರು ಸಿಂಚನವಾದಗ ಗದ್ದೆ ಹೊಳ್ಕೆ  ಶುರು ಆಗುತಿತ್ತು( ಹೋಳ್ಕೆ ಮೊದಲ ಹಂತದ ಉಳುಮೆ) ಮಾಡಿ  ಸಸಿ ಹಾಕಲು ರೆಡಿ ಆಗುತ್ತಿದ್ದರು , ಜೂನ್ ಹದಿನೈದು ಹದಿನಾರಕ್ಕೆ ಗದ್ದೆಯಲ್ಲಿ ನೀರಾಗಿ ಸಸಿ ಹಾಕಲು  ಯೋಗ್ಯವಾಗಿರುವಂತೆ ಭೂಮಿ ಮಾರ್ಪಾಡಗಿರುತ್ತಿತ್ತು. ಇಂತಹ ಸಂದರ್ಭದಲ್ಲಿ ಮಲೆನಾಡಿನ ರೈತರು ಮೈಯಳಿಗೆ  ಕೆಲಸಕ್ಕೆ ಹೋಗುವುದರ ಮೂಲಕ ಗದ್ದೆ ನಾಟಿಯ ಕೆಲಸವನ್ನು ಆರಂಭಿಸುತ್ತಿದ್ದರು.. ಮೊದಲು ಹಳ್ಳದಲ್ಲಿ ಗೋಣಿಚೀಲದಲ್ಲಿ  ಒಳ್ಳೆಯ ಐಟಿ , ಜೋಳಗ , ಹೆಗ್ಗೆ  ಮೊಳಕೆಯ ಭತ್ತಗಳನ್ನು  ಕಟ್ಟಿ ಹಳ್ಳದಲ್ಲಿ ನೆನೆಹಾಕಿರುತ್ತಿದ್ದರು. ನಂತರ ಎತ್ತಿನ ಜೋಡಿಗೆ ಹೇಳಿ   ಅಗಡಿ ರೆಡಿ ಮಾಡುತ್ತಿದ್ದರು , ಅಗಡಿಯಲ್ಲಿ  ನಳ್ಳಿ ಯಿಂದ ಸಮತ್ತಟ್ಟ ಮಾಡಿ ಭತ್ತ ಬಿತ್ತನೆ ಮಾಡುತ್ತಿದ್ದರು , ಭತ್ತದ ಸಸಿ ನಾಟಿ ಮಾಡಲು ಯೋಗ್ಯವಾದಗ ನಾಟಿ ಕಾರ್ಯ ಶುರು ಮಾಡುತಿದ್ದರು.

        ಮಲೆನಾಡಲ್ಲಿ ನಾಟಿ ಕಾರ್ಯ ಶುರುವಾದರೆ  ಒಂಥರ   ಹಬ್ಬದ ವಾತರವರಣವೇ ಸರಿ ಊರವರೆಲ್ಲ ಸೇರಿ  ಗುಂಪಾಗಿ ಮೈಯಳಿಗೆ  ಬ್ಯಾಚ್ ಮಾಡಿ ಗೋರಬು ಹೊತ್ತು ಹೆಂಗಸರು ಹರಟೆ ಹೊಡೆಯುತ್ತ  ಮುದುಕಿಯರು ಎಲೇ ಅಡಕೆ ಸುಣ್ಣದ ಡಬ್ಬಿ ಒಂಚೂರು ತಂಬಾಕು ಹಿಡಿದು ಗಂಡಸರು ಹಾರೆ ಬುಟ್ಟಿ ಹಿಡಿದು ಗದ್ದೆಗೆ ಇಳಿಯುವರು

ಜೀವನ್ ಮೃತ್ಯು ! ಕೊರೊನ ನಡುವೆ ಬದುಕು ಹೇಗೆ

ಸ್ನೇಹಿತರೇ, ನಮಗೆ ತಿಳಿದಿರುವ ಹಾಗೇ ಈ ಜಗತ್ತಿನಲ್ಲಿ ನಾವು ಊಹೆಗೂ ನಿಲುಕಿಸದ ಪರಿಸ್ಥಿತಿ ಬಂದೊದಗಿದೆ. ಕಾಲವು ಚಲಿಸುತ್ತಲೇ ಇದೆ ಆದರೆ ಈ ಕಾಲವನ್ನು ಕಣ್ಣಿ...