Wednesday 21 August 2019

ಆರಗ ಜ್ಞಾನೇಂದ್ರ , ನಿಮ್ಮ ನಂಬಿ ವೋಟ್ ಹಾಕಿದ್ದ ನಮಗೆ ಮೋಸ ಮಾಡಿ ಬಿಟ್ಟಿರಲ್ಲ.
ಈ ಬಾರಿ ನೀವು ಮಂತ್ರಿ ಆಗಿಯೇ ಆಗುತ್ತಿರಿ ಪಕ್ಷದಲ್ಲಿ ಅಷ್ಟು ಪ್ರಬಲರು  ಎಂದು ಕೊ0ಡಿದ್ದೇವಲ್ಲ ,.. ನಿಮ್ಮನ್ನ ನಂಬಿ ನಾವು ಕೆಟ್ಟೆವಲ್ಲ..
 ನೀವು ಈ ಎಲ್ಲ ನಡುವಳಿಕೆ ಮಾಡಬೇಕಿತ್ತು ಆಗ ನಿಮಗೆ ಪಕ್ಷದಲ್ಲಿ ಸಚಿವ ಸ್ಥಾನ ಸಿಗುತ್ತಿತ್ತು..
ಇಲ್ಲ ಸಲ್ಲದನ್ನು ಮೈ ಮೇಲೆ ಹಾಕಿಕೊಂಡು ದಿನಕ್ಕೊಂದು ಬುಕಾಳಿ ಕಾಮೆಂಟ್ tv ಮುಂದೆ ಹೊಡಿಯಬೇಕಿತ್ತು..
ಯಾವಾಗಲೂ ರೆಬೆಲ್ ಅತೃಪ್ತರಾಗಿದ್ದಂತೆ ತೋರಿಸಿ ಕೊಳ್ಳ ಬೇಕಿತ್ತು..
ಭ್ರಷ್ಟಾಚಾರ ಮನೆ ಮರುಕು ತಲೆ  ಹಿಡುಕ ಕೆಲಸಗಳನ್ನ ಮಾಡಿ ಸದಾ ಮಾಧ್ಯಮಗಳಲ್ಲಿ ದಿನ ಕಾಣಿಸಿಕೊಳ್ಳ ಬೇಕಿತ್ತು.
ಒಂದೇ ಪಕ್ಷಕ್ಕಾಗಿ ಸುಮಾರು 45 ವರ್ಷಗಳ ಕಾಲ ಜೀತದಾಳುವಿನಂತೆ ದುಡಿದಿದ್ದರಲ್ಲ ಅದು ನಿಮ್ಮ ಮೂರ್ಖತನ ದಿನಕ್ಕೊಂದು ಪಕ್ಷ ಲಾಭಕ್ಕಾಗಿ ಹವಣಿಸ ಬೇಕಿತ್ತು..
ಹಗರಣಗಳಲ್ಲಿ ನಿಮ್ಮದು ಒಂದು ಸಿಂಹ ಪಾಲು ಯಾವಾಗ್ಲೂ ಇರಬೇಕಿತ್ತು..
ದೊಡ್ಡ ದೊಡ್ಡ (ನಿಮ್ಮ ಮುಂದೆ ಬಚ್ಚಗಳು ಹಗರಣ ಹಾಳು ಮೂಳು ಮಾಡಿ ಬೇವರ್ಸಿ ಮಾಧ್ಯಮಗಳಿಂದ ದೊಡ್ಡವರಾದವರು) ಅವರುಗಳ ಬಳಿ ಹಿಂದೆ ಮುಂದೆ ದಿನ ಪ್ರತಿ ಕ್ಷೇತ್ರ ಬಿಟ್ಟು ಓಡಾಡಲು ನಿಮಗೆ ಆಗಲಿಲ್ಲ..ಬಕೆಟ್ ರಾಜಕಾರಣ ಮಾಡಲು ನಿಮಗೆ ಬರಲಿಲ್ಲ.
ಕೋಟಿ ಒಡೆಯರು ಕೋಟಿ ಕಾರುಗಳನ್ನು ಇಟ್ಟು ಶೋಕಿ ಮಾಡಲು ನಿಮಗೆ ಆಗಲಿಲ್ಲ.. ಕುಟುಂಬ ರಾಜಕಾರಣ ಮಾಡಿ  ಸಂಖ್ಯಾ ಬಲ ನನ್ನದು ಇಷ್ಟಿದೆ ಎಂದು ಹೇಳಿಕೊಳ್ಳುವವರು ನಿವಲ್ಲ..
ರೇಬಲ್ ಅಲ್ಲ , ಮೋಸ ಹೊಂಚುಗಾರನಲ್ಲ ,  ಉಂಡ ಮನೆಗೆ ಯಡಿಯೂರಪ್ಪ ನಂತೆ 2 ಬಗೆದವರಲ್ಲ .. ಇಂತ ಎಲ್ಲ ಗುಣಗಳು ಇಲ್ಲದಿದ್ದ ಮೇಲೆ ನಿಮ್ಮನ್ನು ನಂಬಿ ಮತ ನೀಡಿದ್ದೇವಲ್ಲ ಈ ಬಾರಿ ಮಂತ್ರಿ ಆಗುತ್ತಿರಿ ಎಂದು  ನೀವು ಮೋಸ ಮಾಡಿ ಬಿಟ್ಟಿರಿ ಇನ್ನು ಮುಂದೆ ಈ ಮೇಲಿನ ಗುಣಗಳ ನಿಮ್ಮದಾಗಿರಿಸಿ ಕೊಳ್ಳಿ ಖಂಡಿತ ಸಚಿವ ರಾಗುವಿರಿ..
           - RIGHT WING KANNADA

Tuesday 20 August 2019

ಭತ್ತದ ಬದುಕು ಸಾದ್ಯವಿಲ್ಲ












      ಮಳೆಗಾಲದಲ್ಲಿ ಯಾವಾಗ ಅಂಗಡಿ ಕಟ್ಟೆಗಳು ಖಾಲಿ ಆಗಿ ಜನರಿಲ್ಲದೆ ನಿಶ್ಶಬ್ದವಾಗಿರುತ್ತದೆಯೋ ಅದರರ್ಥ ಮಲೆನಾಡಿನಲ್ಲಿ ಜನ ಕೃಷಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆ ಎಂದು.. 
ಮಲೆನಾಡಿನಲ್ಲಿ ಅಡಿಕೆ ಬೆಳೆಗಾರರ ಜೀವನ ಸ್ವಲ್ಪ ಸಮಯದ ಹಿಂದೆ ಉತ್ತಮವಾಗಿತ್ತು ಆದ್ರೆ ಈಗ ಅವರ ಪರಿಸ್ಥಿತಿಯು ಹದಗೆಟ್ಟಿದೆ ಆದ್ರೆ ಭತ್ತ ಬೆಳೆಯುವವರಿಗಿಂತ ಏನು ಹದಗೆಟ್ಟಿಲ್ಲ. ನಾವೆಲ್ಲ ನೋಡಿದ್ದೇವೆ  ರಸ್ತೆ ಬದಿಯ ಗದ್ದೆಗಳು ನಿವೇಶಗಳು ಶಾಪಿಂಗ್ ಮಾಲ್ ಗಳು ಆದ್ರೆ  , ಇನ್ನು  ಮಕ್ಕಿ ಗದ್ದೆಗಳು  ತೋಟಗಳು , ನೀಲಗಿರಿ ಅಕೇಶಿಯ ಪ್ಲಾಂಟೇಶನ್ ಗಳಾಗಿ ಬದಲಾಗುತ್ತಿವೆ.ಹಾಗದರೆ  ಭತ್ತ ಬೆಳೆಯುವವರು ಹಿಂದೇಟು ಹಾಕಲು ಗದ್ದೆಗಳನ್ನ ಹಾಳು ಬಿಡಲು ಕಾರಣವನ್ನು ಹುಡುಕುತ್ತ ಹೊರಟರೆ ಸಿಗುವ ಕಾರಣಗಳು ಹಲಾವಾರು ಆದರೆ ಅವೆಲ್ಲ ಕಾರಣಗಳಲ್ಲಿ  ಉಳಿದಿರುವ  ಒಂದೇ ಸತ್ಯ ಲಾಭವೇ ಇಲ್ಲ  , ಮೂರು ಹೊತ್ತು ಉಣ್ಣಲು ಭತ್ತ ಮನೆಯ ಕಣಜದಲ್ಲಿ ಇರುತ್ತದೆ ಹೊರತು ಬೇರೇನೂ ಲಾಭವೂ ಇಲ್ಲ..
ಭತ್ತ ಬೆಳೆಯುವ ರೈತರು ಇಂದು ಶ್ರೀಮಂತರಾಗಿ ಉಳಿದಿಲ್ಲ , ಇಂದು ಭತ್ತ ಬೆಳೆಯುವ ರೈತರು ಅದರಲ್ಲೂ ಮಲೆನಾಡಿನ ಭಾಗದಲ್ಲಿ ಬಡವರು ಮಾತ್ರ, ಯಾರಿಗೆ ಹೊಳೆಯಿಂದ ನೀರು ತರುವ ಶಕ್ತಿಇಲ್ಲವೋ , ಯಾರಿಗೆ ಬೋರ್ವೆಲ್ ಹೊಡೆಸಿ ನೀರು ತಂದು ತೋಟ ಮಾಡುವ ಶಕ್ತಿ ಇಲ್ಲವೋ  ಇಂತವರು ಇನ್ನು  ಗದ್ದೆಯನ್ನು ಇಟ್ಟುಕೊಂಡಿದ್ದರೋ ಹೊರತು ,  ಆರ್ಥಿಕವಾಗಿ ಸದೃಢ ಇದ್ದವರು ಕಾಡು ಗದ್ದೆ ಸಾಯಲಿ ಕಾಡು ಗುಡ್ಡವನ್ನು ಒಳ ಹಾಕಿ  ತೋಟ ಮಾಡಿದ್ದಾರೆ. ಭತ್ತ ಬೆಳೆಯುವವರ  ಪರಿಸ್ಥಿತಿ ಎಷ್ಟು ಹೀನಾಯವಾಗಿದೆ ಎಂದರೆ  ನಾನು ಹೇಳುವ ಬದಲು ನೀವೇ ಮುಂದೆ ಈ ಲೇಖನ ಓದಿದರೆ ಮನಸಲ್ಲಿ ಹೀಗೊಂದು ಯೋಚನೆ ಬರದೆ ಇರದು ಕೂಲಿ ಮಾಡಿದರೆ ಉತ್ತಮ ಜೀವನವಿದೆ ಎಂದು.

     ನೀವು ಯೋಚಿಸಿರ ಬಹುದು ಬರೀ ಕಷ್ಟ ಕಷ್ಟ ಎಂತಾ ಹೇಳುತ್ತಲೇ ಹೋಗುತ್ತಿದ್ದಾನೆ ಈ ಲೇಖಕ  ಹಾಗಾದ್ರೆ ಏನು ಕಷ್ಟಗಳೆಂದು ಅದಕ್ಕಾಗಿ ಸಣ್ಣ ಲೆಕ್ಕಾಚಾರ ನಿಮ್ಮ ಮುಂದೆ .

  ಮೂರು ಏಕರ್ರೆ ಗದ್ದೆಗೆ (ಕೆಲಸಕ್ಕೆ ಬಂದವರ ಊಟ ತಿಂಡಿಗಳನ್ನು ಇನ್ನಿತರ ಸಣ್ಣ ಪುಟ್ಟ ಖರ್ಚುಗಳನ್ನು ಬಿಟ್ಟು)

ಗದ್ದೆ ಹೊಳ್ಕೆ ಗೆ  ಟ್ರಾಕ್ಟರ್ಗೆ - 3000 ಸಾವಿರ.
ಸಸಿ ಹಾಕಲು ಆಳು ಮತ್ತು ಹೂಟಿಗೆ - 2500 ರೂಪಾಯಿಗಳು.
ಅಂಚು ಕಡಿಯಲು ಕನಿಷ್ಠ 5 ಆಳಿಗೆ  - 2500ರೂಪಾಯಿಗಳು
ಗದ್ದೆ ನೆಟ್ಟಿಗೆ ಆಳಿಗೆ- 2700ಪ್ರತಿ ಎಕರೆಗೆ *3 ಎಕರೆ = 7100ರೂಪಾಯಿಗಳು
ಗದ್ದೆ ಹೂಟಿ = ಪ್ರತಿ ಗಂಟೆಗೆ 650 *ಕನಿಷ್ಠ ಘಂಟೆಗೆ = 5200
ಗದ್ದೆಗೆ ಗೊಬ್ಬರ = 3 ಮೂಟೆ = 1300*3 = 3900
ಗದ್ದೆಗೆ ಔಷಧಿ = 1000
ಗದ್ದೆ ಕಳೆ ತಗಿಯಲು = 5 ಆಳು ನಾವೇ ಕೆಲ್ಸ ಮಾಡಿದ್ರು ಬೆಲೆ ಉಂಟಾಲ್ಲ ಶ್ರಮಕ್ಕೆ = 250*5= 1250
ಗದ್ದೆ ಕೊಯ್ಲು = 20 ಆಳು * 350=7000
ಗದ್ದೆ ಹೊರೆ = 14 ಆಳು *350=  4900
ಒಕ್ಕಲಾಟ = 8000
ಕೆಲ್ಸದವ್ರಿಗೆ ಊಟ ಎಲ್ಲ ಬಿಟ್ಟು ಖರ್ಚು 43850
ಭತ್ತ ಮಾರಿದಾಗ ಸಿಗುವುದು 
25 quintal * 1200 = 32500
ಹುಲ್ಲು ಮಾರಿದ್ರೆ ಒಂದು 15000
ಒಟ್ಟು 47500
-         43850
ಒಟ್ಟು  ಲಾಭ .3650 .  ಸಾಕ ಒಬ್ಬ ಜೀವನ ನಡೆಸೋದಕ್ಕೆ ಸಾದ್ಯವ ಈ ಗದ್ದೆ ನಂಬಿ ಮಲೆನಾಡಿನಲ್ಲಿ..  ..
3650 ಅಂದ್ರೆ ದಿನಕ್ಕೆ  10 ರೂಪಾಯಿ.. ಬದುಕೊಕೇ ಆಗುತ್ತಾ.. (ಗದ್ದೆಗೆ ಒಡ್ಡು ಬೇಲಿ ಮಾಡಿದೆಲ್ಲವನ್ನು ಬಿಟ್ಟು )
      ಗದ್ದೆ ಭತ್ತದ ಕೃಷಿ ಮಾಡಿ ಸದೃಢ ಜೀವನ ಮಾಡಲಿಕ್ಕಂತೂ ಸಾಧ್ಯವಿಲ್ಲ.. ದಿನಕ್ಕೆ ಹತ್ತು ರೂಪಾಯಿ ಅಂದ್ರೆ ಭಿಕ್ಷುಕನಿಗಿಂತಲು ಸಣ್ಣ ಮಟ್ಟದ ಜೀವನ.. ಆದ್ದರಿಂದಲೇ ಇಂದು  ಸಾಕಷ್ಟು ಭತ್ತ ಬೆಳೆಗಾರರು ಕೂಲಿಯನ್ನ ಅವಲಂಬಿಸಿದ್ದಾರೆ.. ಇಲ್ಲ ಅಂದ್ರೆ ಹೇಗೆ ಬದುಕಬೇಕು ಹೇಳಿ ವಿದ್ಯಾಭ್ಯಾಸ , ಸಂತೆ ಸಾಮಾನು ಇನ್ನು ಹಲವಾರಕ್ಕೆ ಕೂಲಿಯೇ ಆಧಾರ..  
      ಪ್ರಸ್ತಕ ಈ ಭಾರಿಯಂತೂ ಜನ ತಲೆಯೇತ್ತುವ ಪರಿಸ್ಥಿತಿಯಲ್ಲಿಯೇ ಇಲ್ಲ ನೆರೆ ಬಂದು ನೆಟ್ಟಿದ್ದ ಗದ್ದೆಗಳು  ನೆಲ ಕಚ್ಚಿವೆ , ಕೆಲವರು ಈ ವರ್ಷದ ಫಸಲಿನ ಆಸೆಯೇ ಬಿಟ್ಟರೆ ಇನ್ನೂ ಹಲವಾರು ಹಲವಾರು ಕಡೆ ಸಸಿ ಹುಡುಕಿ ಮತ್ತೆ ನಟ್ಟಿ ಮಾಡಲು ಶುರು ಮಾಡಿದ್ದಾರೆ. ಹೀಗಿರುವಾಗ ಸರ್ಕಾರ ಸೂಕ್ತ ಪರಿಹಾರ ನೀಡಿದರೆ ಬಡವರಿಗೆ ಸ್ವಲ್ಪ ಸಹಾಯವಾಗ ಬಹುದು , ಬಂದ ಪರಿಹಾರವು ನೂರ ಎಂಟು ಗಿಡುಗ ಹದ್ದು ಗಳು ನುಂಗಿ ಎಕರೆ ಇನ್ನೂರು ಮುನ್ನೂರು ಕೊಡುವ ಬದಲು ಹಾಗೆ ಇದ್ದರೆ ಒಳ್ಳೆಯದು  ಎನ್ನುವುದು ನನ್ನ ಭಾವನೆ.  ನಮ್ಮ ಜನರು ಅದರಲ್ಲೂ ಭತ್ತ ನಂಬಿ ಬದುಕುವವರು ಬಡವರು  ಭತ್ತ ಬೆಳೆದು ಬದುಕೊಕೇ ಸಾಧ್ಯವಿಲ್ಲ ತೋಟ ಮಾಡಲು ಹಣವಿಲ್ಲ ಭತ್ತ ಬೆಳೆಯುವವರು ಬಡವರು..
         - ಸಂಕೇತ ಜಿ ಎಂ ತೀರ್ಥಹಳ್ಳಿ









ಜೀವನ್ ಮೃತ್ಯು ! ಕೊರೊನ ನಡುವೆ ಬದುಕು ಹೇಗೆ

ಸ್ನೇಹಿತರೇ, ನಮಗೆ ತಿಳಿದಿರುವ ಹಾಗೇ ಈ ಜಗತ್ತಿನಲ್ಲಿ ನಾವು ಊಹೆಗೂ ನಿಲುಕಿಸದ ಪರಿಸ್ಥಿತಿ ಬಂದೊದಗಿದೆ. ಕಾಲವು ಚಲಿಸುತ್ತಲೇ ಇದೆ ಆದರೆ ಈ ಕಾಲವನ್ನು ಕಣ್ಣಿ...