Tuesday 25 May 2021

ಜೀವನ್ ಮೃತ್ಯು ! ಕೊರೊನ ನಡುವೆ ಬದುಕು ಹೇಗೆ

ಸ್ನೇಹಿತರೇ, ನಮಗೆ ತಿಳಿದಿರುವ ಹಾಗೇ ಈ ಜಗತ್ತಿನಲ್ಲಿ ನಾವು ಊಹೆಗೂ ನಿಲುಕಿಸದ ಪರಿಸ್ಥಿತಿ ಬಂದೊದಗಿದೆ. ಕಾಲವು ಚಲಿಸುತ್ತಲೇ ಇದೆ ಆದರೆ ಈ ಕಾಲವನ್ನು ಕಣ್ಣಿಗೆ ಕಾಣದ ವೈರಸ್ ನಡೆಸುತ್ತಿದೆ. ಹಲವಾರು ಸಂಶೋಧನೆಗಳನ್ನು ಮಾಡುತ್ತಾ ಮುಂದುವರಿಯುತ್ತಿದ್ದ ನಮ್ಮ ಮನುಕುಲಕ್ಕೆ ಕೊರೋನಾವೇ ಸವಾಲಾಗಿದೆ. ಇಂತಹ ಕೊರೋನ ಹಲವಾರು ಜನರ ಜೀವವನ್ನು ತೆಗೆದಿದೆ ಮತ್ತೊಮ್ಮೆ ದ್ವಾಪರಯುಗದ ಯುದ್ಧನಂತರದ ಹೆಣಗಳ ರಾಶಿಯನ್ನು ನೆನಪುಮಾಡುವಂತಿದೆ. ಕೆಲವರ ಜೀವನದಲ್ಲಿ ಯಾರೂ ಇಲ್ಲದಂತೆ ಒಂಟಿ ಮಾಡಿದೆ. ಕೆಲವರು ಮನೆಯೊಳಗೇ ಕಿರುಕುಳ ಅನುಭವಿಸುತ್ತಿದ್ದಾರೆ, ಬಾಲ್ಯವಿವಾಹ ಮತ್ತೆ ನಡೆಯುತ್ತಿದೆ. ಸಮಾಜದ ಭೀತಿಯಿಂದ ಸೋಂಕಿತರು ನರಳುತ್ತಿದ್ದಾರೆ, ವೆಚ್ಚಭರಿಸಲಾರದೇ ಸಾಯುತ್ತಿದ್ದಾರೆ. ಈ ರೀತಿ ಇದು ಆವರಿಸಿರುವುದು ದೇಹಮಾತ್ರವಲ್ಲ ಮನಸ್ಸನ್ನು ಕೂಡ ಎಂದು ತಿಳಿಸಿದೆ. ಕೆಲವೆಡೆ ಭಾವನೆಗಳಿಗೆ ಬೆಲೆಯೇ ಇಲ್ಲದಂತೆ ಮಾಡುತ್ತಿದೆ. ಮನುಷ್ಯರ ಮನಸ್ಸುಗಳ ಮಧ್ಯೆ ಬಾಂಧವ್ಯವನ್ನು ಕಸಿಯುತ್ತಿದೆ. ಇನ್ನೂ ಕೆಲವೆಡೆ ಯಾವಾಗಲೂ ಕೆಲಸ, ಓಡಾಟದ ನಡುವೆ ಬ್ಯುಸಿಯಾಗಿದ್ದವರನ್ನು ಒಂದೆಡೆ  ಸೇರಿಸಿ ಒಗ್ಗಟ್ಟನ್ನು ಕೂಡ ಕಲಿಸುತ್ತಿದೆ. ಕೊರೊನ ಜೀವನವನ್ನು ಕಲಿಸುತ್ತಿದೆ,ಹಾಗೇಹೆ ಮೃತ್ಯು ಕೂಪಕ್ಕೂ ತಳ್ಳುತಿದೆ. ಈ ರೀತಿ ಮಹಾಮಾರಿ ನಮ್ಮನ್ನು ಆಡಿಸುತ್ತಿದೆ.  ಮೊದಲ ಅಲೆಗಿಂತಲೂ ಎರಡನೇ ಅಲೆಯಲ್ಲಿ ಹಳ್ಳಿಹಳ್ಳಿಗೂ ಕಾಲಿಟ್ಟ ಕೊರೋನ ಬಂಧುಗಳಂತೆ ಇದ್ದ ಅಕ್ಕಪಕ್ಕದ ಜನರ ನಿಜಮುಖ ದರ್ಶನಮಾಡಿಸಿದೆ.ಹಾಗೆಯೇ ನಿಜವಾದ ಒಳ್ಳೆಯ ಭಾವನೆ ಇರುವ ಮನುಷ್ಯರನ್ನೂ ಕೂಡ ಪರಿಚಯಿಸುತ್ತದೆ. ಗುಂಪು ಗೂಡಿ ಲಗೋರಿ, ಕುಂಟೆಬಿಲ್ಲೆ ಆಡುತ್ತಿದ್ದ ಮಕ್ಕಳು ಇದೀಗ ಕೇವಲ ಒಂದೇ ಜಾಗದಲ್ಲಿ ಕುಳಿತು ಮೊಬೈಲ್ ಎಂಬ ಪ್ರಪಂಚದೊಳಗೆ ಇಳಿದಿದ್ದಾರೆ. ಇನ್ನೂ ಕೆಲವರು ಚಿತ್ರಕಲೆ, ಸಂಗೀತ, ನೃತ್ಯ ಮುಂತಾದವುಗಳಲ್ಲಿ ತೊಡಗಿಸಿಕೊಂಡು ಜಡವಾಗಿರದೆ ಇರಲು ಪ್ರಯತ್ನಿಸುತ್ತಿದ್ದಾರೆ.
ಸ್ನೇಹಿತರೇ, ಹೀಗೆಲ್ಲಾ ಇರುವಾಗ ಕೊರೋನ ಬಂದ ವ್ಯಕ್ತಿಯು ಯಾವ ಕ್ಷಣಕ್ಕೂ ಹೆದರದೆ, ಹಾಗೆಯೇ ಸಾಮಾನ್ಯ ಜ್ವರವೆಂದು ಕೂಡ ತಡೆಗಣಿಸದೇ ಟೆಸ್ಟ್ ಮಾಡಿಸಿ ಅಥವಾ ರೋಗಲಕ್ಷಣಗಳು ಕಂಡು ಬಂದಲ್ಲಿ ದಿನಕ್ಕೆ ನಾಲ್ಕು ಬಾರಿ ಬಿಸಿನೀರಿನ ಹಬೆ, ಲಿಂಬೆ ಹಣ್ಣನ್ನು ನೀರಿಗೆ ಹಿಂಡಿ ಕುಡಿಯುವುದು. ನೆಲನೆಲ್ಲಿ, ತುಳಸಿಯಂತಹ ಔಷಧೀಯ ಸಸ್ಯಗಳ ಕಷಾಯ ಕುಡಿಯುವುದು, ಕಫ ಕಟ್ಟದೇ ಇರುವ ರೀತಿ ಮುನ್ನೆಚ್ಚರಿಕೆ ವಹಿಸುವುದು, ಇಮ್ಯೂನಿಟಿ ಜಾಸ್ತಿ ಮಾಡುವಂತಹ ಹಣ್ಣು, ತರಕಾರಿ , ಸೊಪ್ಪನ್ನು ತಿನ್ನುವುದು. ಪದೇ ಪದೇ ಕೈ ತೊಳೆದುಕೊಳ್ಳುವುದು ಇದರ ಜೊತೆ ಜೊತೆಗೆ ಉತ್ತಮ ಡಾಕ್ಟರ್ ಸಲಹೆ ಪಡೆದು ಔಷಧೀಯನ್ನು ತೆಗೆದುಕೊಳ್ಳುವುದು. ರೋಗ ಲಕ್ಷಣಗಳು ಕಾಣಿಸಿಕೊಂಡ ತಕ್ಷಣ ಆ ವ್ಯಕ್ತಿ ಮನೆಯವರಿಂದ ಸ್ವಲ್ಪ ಅಂತರ ಕಾಯ್ದು ಕೊಳ್ಳುವುದು, ಕೆಮ್ಮುವಾಗ , ಸೀನುವಾಗ ಕರವಸ್ತ್ರ ಬಳಸಿ ನಂತರ ಅದನ್ನು ಚೆನ್ನಾಗಿ ತೊಳೆದು ಹಾಕುವುದು. ಈ ರೀತಿಯಿಂದ ನಾವು ಈ ಕಾಯಿಲೆಯಿಂದ ಸ್ವಲ್ಪ ಸುಧಾರಿಸಬಹುದು.
ಸ್ನೇಹಿತರೇ ನಾವು ಸುರಕ್ಷಿತವಾಗಿ ಅಂತರವನ್ನುಕಾಪಾಡಿಕೊಂಡು ಮಾಸ್ಕನ್ನು ಧರಿಸಿ  ಕಷ್ಟದಲ್ಲಿರುವವರಿಗೆ ಸಹಾಯ ಮಾಡೋಣ.  ಜೀವಾಮೃತ ನೀಡುವ ಡಾಕ್ಟರ್ ನರ್ಸ್ಗ್ ಳು ಹೆದರಿ ರೋಗಿಯ ಕಡೆ ನೋಡಿಲ್ಲ ವೆಂದರೆ ನಮ್ಮಕತೆಏನಾಗುತ್ತಿತ್ತು? ಯಾರು ಸಹಾಯ ಮಾಡದೇ ಇದ್ದರೆ ಹಳ್ಳಿಮನೆಯಲ್ಲಿ ಒಂಟಿ ಇರುವವರ ಕತೆಯೇನು? ಸಹಾಯಮಾಡಲಾಗದಿದ್ದರೂ ಇಲ್ಲ ಸಲ್ಲದ ಮಾತಾಡುವುದನ್ನು ಬಿಟ್ಟು, ಸಾಧ್ಯವಾದರೆ ಕರೆ ಮಾಡಿಯಾದರೂ ಮಾತಾಡಿ ಯೋಗಕ್ಷೇಮ ವಿಚಾರಿಸಿ  ಅವರಿಗೆ ಧೈರ್ಯ ತುಂಬೋಣ. ಸಹಾಯ ಮಾಡುವವರನ್ನು ಗೌರವಿಸೋಣ.                              
ಹೀಗೆಯೇ ಈ ಸಮಯದಲ್ಲೂ ಕೂಡ ಸಾಧಕರು ರೈತರು ತಟಸ್ಥವಾಗಿಲ್ಲ, ಹಾಗೆಯೇ ನಾವೆಲ್ಲರೂ ಈ ಲಾಕ್ಡೌನ್ ಸಮಯವನ್ನು ಸದುಪಯೋಗ ಪಡಿಸಿಕೊಳ್ಳೋಣ,ಹೊಸತನ್ನು ಕಲಿಯೋಣ.ನಮ್ಮ ಗುರಿಯೆಡೆಗೆ ತಲುಪುವ ತಯಾರಿ ಮಾಡಲು ಅವಕಾಶ ಸಿಕ್ಕಿದೆ ಬಳಸಿಕೊಳ್ಳೋಣ. ಲಾಕ್ಡೌನ್ ಆದರೂ ಕಾಲ ನಿಂತಿಲ್ಲ, ನಮ್ಮಹಸಿವು ನಿಂತಿಲ್ಲ, ಈ ಸಮಯವನ್ನು ಧೈರ್ಯದಿಂದ ಎದುರಿಸೋಣ.ಮನೆಯಲ್ಲಿದ್ದು ನಮ್ಮ ಆರೋಗ್ಯವನ್ನು ಕಾಪಡಿಕೊಳ್ಳೋಣ.   ************************       
#ಅನನ್ಯ ವಿ ಎಂ 
#ವರ್ತೆಗದ್ದೆ

Tuesday 18 May 2021

ಕರ್ಣನ್ KARNAN ಹೇಗಿದೆ ಗೊತ್ತಾ!!??

ಕರ್ಣನ್ , ಧನುಷ್  ಅಭಿನಯದ ಅದ್ಬುತ ಸಿನಿಮಾ!!.
ಈ ಸಿನಿಮಾದ ಕಂಟೆಂಟ್ ಸರಳವಾದದ್ದು ಆದರೂ ತೆರೆಮೇಲೆ ಹೆಣೆದಿರುವ ರೀತಿ ಅದ್ಭುತ ಅತ್ಯದ್ಭುತ ಅಮೋಘ.. 

ಚಿತ್ರ ಕೊಂಚ ನಿಧಾನವಾಗಿ ವಾಗಿ ಸಾಗ್ತಾ ಇದ್ರು ಸಹ ಸಾಮಾನ್ಯವಾಗಿ ಕೇಲವೊಂದು ಚಿತ್ರಗಳಲ್ಲಿ ಶಾಟ್ ಗಳನ್ನ ನೋಡಿ ಮುಂದೆ ಹೀಗೆ ಆಗಬಹುದು ಎಂದು ಊಹಿಸಬಹುದು ಆದರೆ ಖಂಡಿತ ಇಲ್ಲಿ ಅದು ಸಾಧ್ಯವಿಲ್ಲ  . 

ನಿರ್ದೇಶಕ  ಇಲ್ಲಿ ಯಾವುದೇ ಕಲ್ಪನ (Fantasy) ಯಲ್ಲಿ ಪ್ರೇಕ್ಷಕರನ್ನ ತೇಲಿಸುವ ಪ್ರಯತ್ನವೇ ಮಾಡಿಲ್ಲ ಇಲ್ಲಿ ಎಲ್ಲವೂ ನೈಜತೆಗಳನ್ನ ಒಳಗೊಂಡಿದೆ ಪ್ರತಿಯೊಂದು  ಸಾಮಾನ್ಯ ಜನರ ಜನ ಜೀವನಗಳ ಒಳಗೊಂಡಿದೆ.

ಮೂವಿ ಫ್ರೆಮ್ to ಫ್ರೆಮ್ ಅದ್ಭುತವಾಗಿ ಮೂಡಿ ಬಂದಿದ್ದು.. ಪೊಲೀಸರು ಬಂದಾಗ ಊರಿನವರೆಲ್ಲ ದೊಡ್ಡ ನೀರಿನ ಟ್ಯಾಂಕ್ ಮೇಲೆ ಅಡಗಿ ಕೂತಿರುತ್ತಾರೆ ಎಂದು ಯಾರು ಊಹಿಸಲು ಸಾಧ್ಯವಿಲ್ಲ ಅಷ್ಟು ಅದ್ಭುತವಾಗಿದೆ ಆ ದೃಶ್ಯ.. ಕುದುರೆ  ಓಡಿಸದ ಬಾಲಕ ಊರಿಗಾಗಿ ಕುದುರೆ ಹತ್ತಿ ಹೋಗುವುದು ರೋಮಾಂಚನಕಾರಿ ಆಗಿದೆ.. 

ಮೊದಲಾರ್ಧದಲ್ಲಿ ಕುಂಟುತ್ತಾ ಸಾಗುವ ಕತ್ತೆಯ  ಕಾಲಿನಂತೆ ಮೊದಲಾರ್ಧ ನಿಧಾನವಾಗಿ ಇತ್ತು ಆದ್ರೆ ಖಂಡಿತ ಸಪ್ಪೆ ಆಗಿರಲಿಲ್ಲ.. ಕತ್ತೆಯ ಕಾಲಿನ ಹಗ್ಗ ಕಡಿದ ನಂತರ ಮೂವಿಯ ಓಟ ಕ್ಕೆ ಎಲ್ಲೆಯಿಲ್ಲ.. ನಿಮ್ಮನ್ನ ಪ್ರತಿ ಸೆಕೆಂಡ್ ಹಿಡಿದಿರುಸುತ್ತದೆ. ಅಲ್ಲಲ್ಲಿ ಧನುಷ್ ತೀರಿ ಹೋದ ತಂಗಿಯ Referance ವಿಭಿನ್ನವಾಗಿದೇ.

ಹಳ್ಳಿ ಯ ಜೀವನ , ಹಳ್ಳಿಯ ಅವ್ಯವಸ್ಥೆ ಕೆಟ್ಟ ವ್ಯವಸ್ಥೆಯ ವಿರುದ್ಧ  ಪೊಲೀಸರ ದರ್ಪ  ಎರಡು ಊರಿನ ನಡುವಿನ ವೈಷಮ್ಯ ದ ನಡುವಿನ ಹೋರಾಟವೇ ಈ ಕರ್ಣನ್..

ಒಟ್ಟಾರೆ ಬಿಜಿಎಮ್ ಬೆಂಕಿ.. ಸಿನಿಮಾಟೋಗ್ರಾಫಿ ಚಿಂದಿ. ಪ್ರತಿಯೊಬ್ಬರ ನಟನೆಯು ಅಮೇಜಿಂಗ್.
ಚಿತ್ರ ಅಮೆಜಾನ್ ಪ್ರೈಮ್ ನಲ್ಲಿದ್ದು ಚಿತ್ರ  ಟೈಮ್ ಇದ್ದಾಗ ಬಿಡುವು ಇದ್ದಾಗ ನೋಡಿದ್ರು ಅಥವಾ ನೀವೇ ಬಿಡುವು ಮಾಡಿಕೊಂಡು ಟೈಮ್ ಮಾಡಿಕೊಂಡು ನೋಡಿದ್ರು ಏನು ತೊಂದರೆ ಇಲ್ಲ ಅಂತಹದೊಂದು ಅದ್ಭುತ ಚಿತ ಕರ್ಣನ್..


ಜೀವನ್ ಮೃತ್ಯು ! ಕೊರೊನ ನಡುವೆ ಬದುಕು ಹೇಗೆ

ಸ್ನೇಹಿತರೇ, ನಮಗೆ ತಿಳಿದಿರುವ ಹಾಗೇ ಈ ಜಗತ್ತಿನಲ್ಲಿ ನಾವು ಊಹೆಗೂ ನಿಲುಕಿಸದ ಪರಿಸ್ಥಿತಿ ಬಂದೊದಗಿದೆ. ಕಾಲವು ಚಲಿಸುತ್ತಲೇ ಇದೆ ಆದರೆ ಈ ಕಾಲವನ್ನು ಕಣ್ಣಿ...