Friday 9 February 2018

ಹೀಗೊಂದು ದಿನ ಶಾಲೆಗೆ ಹೋಗಲು ಮನಸಿರಲಿಲ್ಲ, ಹೋಗಲು ಮನಸಿರದಿರುವುದಕ್ಕೂ  ಒಂದು ಕಾರಣವಿದೆ ಅದನ್ನು  ಮುಂದೆ ಹೇಳುತ್ತಹೋಗುತ್ತೇನೆ.2010 ರಲ್ಲಿ ಏಳನೆ ತರಗತಿ ಮುಗಿಸಿ ಎಂಟನೇ ತರಗತಿಗೆ ಆಗುಂಬೆಯ ಶ್ರೀ ವೇಣುಗೋಪಾಲ ಸ್ವಾಮಿ ಸ್ಕೂಲ್ ಅನ್ನು ಸೇರಿದೆವು. ಸೇರಿದೆವು ಎನ್ನುವುದರಲ್ಲಿಯೇ ನೀವು ಅರಿತುಕೊಳ್ಳಬೇಕಿತ್ತು ಇದ್ದವನು ನಾನೊಬ್ಬನೇ ಅಲ್ಲ ನನ್ನೊಡನೆ ಇನ್ನೊಬ್ಬನಿದ್ದ. ಇಬ್ಬರು ಸೇರಿ ಆಗುಂಬೆ ಶಾಲೆಗೆ ಇಪ್ಪತ್ತೆರಡು ಕಿಲೋಮೀಟರ್ ಪ್ರಯಾಸದ ಪ್ರಯಾಣ ಮಾಡಿ ಶಾಲೆಗೆ ತೆರಳುತ್ತಿದ್ದೆವು ನಮ್ಮಿಬ್ಬರಿಗೆ ಇಷ್ಟವಿಲ್ಲದಿದ್ದರು ಆಗುಂಬೆಯ ಆಶಾಕಿರಣ ಹಾಸ್ಟೆಲ್ನಲ್ಲಿ ನಮ್ಮಿಬ್ಬರ ಸಿಲುಕಿಸಲಾಯಿತು ,ನನಗಂತೂ ಆ ಹಾಸ್ಟೆಲ್ ಗೆ ಹೋಗೋಕೆ ಇಷ್ಟವೆ ಇರಲಿಲ್ಲ ಅಲ್ಲಿ ಬಿಸಿನೀರಿನ ಸ್ನಾನ ಮಾಡಬೇಕು ಎಂದಿದ್ದರೆ ಮನೆಯಿಂದ ಕಟ್ಟಿಗೆ ತೆಗೆದುಕೊಂಡು ಹೋಗಿ ಹಾಕಿಸಬೇಕಿತ್ತು

Wednesday 7 February 2018

ನಾವು ತೀರ್ಥಹಳ್ಳಿಯವರು

ನಾವು ಅಂತವರು
ಹೃದಯಸ್ಪರ್ಶಿ ಗುಣದವರು
ಎದೆಯುಬ್ಬಿಸಿ ನಡೆಯುವವರು
ಬದುಕುವ ಛಲದವರು
ಎಲ್ಲರೂ ನಮ್ಮವರು
ನಾವು ತೀರ್ಥಹಳ್ಳಿಯವರು..

ಹಳ್ಳಿಯ ಸೊಬಗಿಗೆ
ಪಟ್ಟಣದ ಚಮತ್ಕಾರ.
ಚಿಗುರೋಡೆದು ನಿಂತಿದೆ
ಕೌಶಲ್ಯದ ಸಾಕ್ಷಾತ್ಕಾರ.
ಹಳ್ಳಿಯಿಂದ ದಿಲ್ಲಿಗೆ
ಮನಮುಟ್ಟಿದ ಗೋಪಾಲಗೌಡರು.

ಹಚ್ಚ ಹಸಿರಿನ ಸೊಬಗಿದು
ಸಮೃದ್ಧತೆಯ ನಾಡಿದು.
ಕುವೆಂಪು ಬರೆದದ್ದು
ವಿಶ್ವಮಾನವ ಸಂದೇಶವದು.
ಅಬಚೂರಿನ ಪೋಸ್ಟ್ ಆಫೀಸು
ಪೂರ್ಣಚಂದ್ರ ತೇಜಸ್ವಿ ಕಂಡದ್ದು.

ಆಗುಂಬೆಯ ಮನೆಯಿದು
ಬಿದನೂರ  ಧರೆಯಿದು
ಮಾರಿಚವಧಿಸಿ ಮೃಗವಧೆಯಿದು.
ಭುವನಗಿರಿಯ ಭವ್ಯತೆಯಿದು
ಕುಪ್ಪಳ್ಳಿಯ ಕವಿಕುಟಿರವಿದು
ಪರಶುವಿನ ತೀರ್ಥರಾಜಪುರವಿದು.

ಗುಬ್ಬಚ್ಚಿಯ ಗೂಡದು
ಪರಿಶ್ರಮದ ಫಲವದು
ನಮ್ಮೆಲ್ಲರ ಮಾತದು
ಎದೆಯ ಬಡಿತವದು
ರೋಮಾಂಚನ ನಮ್ಮೂರದು
ಹೆಮ್ಮೆಯ ತೀರ್ಥಹಳ್ಳಿಯದು.

ನಾವು ಅಂತವರು
ಹೃದಯಸ್ಪರ್ಶಿ ಗುಣದವರು
ಎದೆಯುಬ್ಬಿಸಿ ನಡೆಯುವವರು
ಬದುಕುವ ಛಲದವರು
ಎಲ್ಲರೂ ನಮ್ಮವರು
ನಾವು ತೀರ್ಥಹಳ್ಳಿಯವರು.

ನಿಮ್ಮ
        ಸಂಕೇತ ಜಿ ಎಮ್ ತೀರ್ಥಹಳ್ಳಿ

Monday 5 February 2018


ಎದೆಗೆ ಬಂದ ಖುಷಿಯ ಇಂದು
ಹೇಳೋ ಮುಂಚೆ ಜಾರಿ ಹೋದೆ ನೀನು.

Saturday 3 February 2018

ನಂದು ತೀರ್ಥಹಳ್ಳಿ

ನಾನೇ ಈಗ ಬರಿಯಲು ಹೊರಟಿರುವೆನಲ್ಲ  ಇದು ನನ್ನದೇ ಆದ ಕಥೆ.
ಹಾಗೋ ಹೀಗೊ  ಪದವಿ ಶಿಕ್ಷಣ ಮುಗಿಸಿದೆ. ಹೆಗಲ ಮೇಲೆ ಭಾರವಾದ ಅನುಭವ, ಮನೆಯಲ್ಲೇನು ಭಾರ ಹಾಕಿರಲಿಲ್ಲ, ಆದರೂ ದುಡಿಯುವ ಹಂಬಲ. ಮನೆಯಲ್ಲಿ ಕೂರಲಾರದೆ,  ಮನೆಯನ್ನು ಬಿಡಲಾರದೆ, ತೀರ್ಥಹಳ್ಳಿಯನ್ನು ಮರೆಯಲಾಗದೆ ಮನೆಯಲ್ಲೇ ಕೂತು  ಒಂದೆರಡು ತಿಂಗಳು ಮಲಗಿ ಎದ್ದೆ ಕಾಲ ಕಳೆಯುವಂತಹ ಪರಿಸ್ಥಿತಿ ಕೆಲವೊಮ್ಮೆ ಮಾತಿಗೆ ಒಂದು ತಿಂಗಳಾದ ನಂತರ ಮನೆಯಲ್ಲಿ ಮನ ಚುಚ್ಚಿಗೆಯ ಮಾತುಗಳು ಹೊರಬರಲಾರಂಭಿಸಿದವು ಅದರಲ್ಲಿಯೂ ಮುಖ್ಯವಾಗಿ "ಅವ ನೋಡು ಯಾರ್ದೋ ಕೈಯೊ ಕಾಲೋ ಹಿಡಿದು ಬೆಂಗಳೂರಿನಲ್ಲಿ ಒಂದು ಕೆಲಸ ಗಿಟ್ಟಿಸಿಕೊಂಡೇ ಬಿಟ್ಟ" ನೀನು ಮನೆಯಲ್ಲೇ ಮಲಗಿ ಕಾಲ ಕಳಿ ಎಂದು.ಹೀಗಿರುವಾಗ ನನ್ನ ಪದವಿ ಗೆಳೆಯರು ಸಹ ಮನೆಯಲ್ಲಿ ಇದೆ ತರಹದ ಪೋಷಕರ ವರ್ತನೆಗೆ ಬೇಸತ್ತು ನಾವೆಲ್ಲರೂ ಸೇರಿ ಬೆಂಗಳೂರು ಪಟ್ಟಣ ಸೇರಿ ಬಿಡುವ ಯೋಚನೆ ಮಾಡಿಯೇ ಬಿಟ್ಟೆವು.ಆದಷ್ಟೂ ಕಡಿಮೆ ಹಣದಲ್ಲಿ ಬೆಂಗಳೂರು ಸೇರಬೇಕು ಎನ್ನುವ ಮನಸ್ಥಿತಿಯಲ್ಲಿ ಇದ್ದವರು ನಾವು ಮೂವರು ತೀರ್ಥಹಳ್ಳಿ ಇಂದ ಬಸ್ಸಿನಲ್ಲಿ ಹತ್ತಿ ಶಿವಮೊಗ್ಗ ವರೆಗೆ ಹೋದ ನಾವು ಅಲ್ಲಿಂದ ಆಟೋ ಮುಕಾಂತಾರ ರೈಲ್ವೆ ನಿಲ್ದಾಣ ತಲುಪಿದೆವು, ಅಲ್ಲಿ ಟಿಕೆಟ್ ಪಡೆದು ರೈಲಿಗಾಗಿ ಕಾದು ಕುಳಿತಿರುವವರಿಗೆ ರೈಲು ಬಂದ ನಂತರ ಗರಬಡೆದು ಹೋಯಿತು ಕಾರಣ ರೈಲ್ವೆ ಸ್ಟೇಷನಿನಲ್ಲಿ ಕಿಕ್ಕಿರಿದು ಸೇರಿದ್ದ ಜನ ಸಮೂಹ ಅಷ್ಟು ಉದ್ದದ ರೈಲು ಬೋಗಿಯನ್ನು ತುಂಬಿ ಹೋಗಿತ್ತು ಮೆಟ್ಟಿಲಿನ ಮೇಲು ಕಾಲು ಇಡಲಾಗದ ಪರಿಸ್ಥಿತಿಯಿಂದಾಗಿ ಕಡಿಮೆ ಹಣದಲ್ಲಿ ಬೆಂಗಳೂರು ಪಟ್ಟಣ ಸೇರುವ ನಮ್ಮ ಆಸೆಗೆ ಮೊದ್ಲೇ ತಣ್ಣೀರು ಎರಚಿತು ಈ ರೈಲು.ಅಲ್ಲಿಂದ  ಇನ್ನೇನು ಮಾಡಲು ಸಾಧ್ಯವೆಂದು ಯೋಚಿಸಿ ಅಲ್ಲಿಂದ auto ಮುಕಾಂತಾರ ಶಿವಮೊಗ್ಗ ಬಸ್ ಸ್ಟ್ಯಾಂಡ್ ಕಡೆಗೆ ಹೊರಡಲು ಆಟೋ ಹಿಡಿದಾಗ ಆತನಿಗೆ ನಡೆದದ್ದು ವಿವರಿಸಿದಾಗ ಆತ ನಮ್ಮ ಟಿಕೆಟ್ ಗಳನ್ನು ತೆಗದುಕೊಂಡು ಹೋಗಿ ಅರ್ಧದಷ್ಟು ಹಣವನ್ನ ನಮ್ಮ ಕೈಗೆ ತಂದಿಟ್ಟರು ಕೊಂಚ ನಿರಾಳವಾಯಿತು ಅದರಿಂದ ಆಟೋ ಬಾಡಿಗೆ ಕೊಟ್ಟೆವು. ನಂತರ ನಮ್ಮ ಪಯಣ ಸಾಗಿದ್ದು ಶಿವಮೊಗ್ಗದ ಖಾಸಗಿ ಬಸ್ ನಿಲ್ದಾಣದ ಕಡೆಗೆ ಅಲ್ಲಿ east and west ಎಂಬ ಖಾಸಗಿ ಬಸ್ ಹತ್ತಿ ಬೆಂಗಳೂರು ಕಡೆ ಹೊರಟ ನನಗೆ ಮನದಲ್ಲೇ ಬೇಸರ ಕಾಡ ತೊಡಗಿತ್ತು ಆದರೂ ಗೆಳೆಯರ ಜೊತೆ ಸೇರಿ sleepr ಕೋಚ್ ಬಸ್ಸಿನಲ್ಲಿಯೇ ರಾತ್ರಿ ಹೊರಟು ಮುಂಜಾನೆಯ ಸಮಯಕ್ಕೆ ಬೆಂಗಳೂರು ತಲುಪಿದ್ದೆವು.ಅನಂತರ ನಮಗೆ ಎದುರಾಗಿದ್ದು ಬೆಂಗಳೂರಿನಲ್ಲಿ ಎಲ್ಲಾದರೂ ಉಳಿದು ಕೊಳ್ಳಬೇಕು ಎಂಬುದು ಆಗ ನನ್ನ ಗೆಳೆಯನ ಗೆಳೆಯ ಬೆಂಗಳೂರಿನಲ್ಲಿ ಇದ್ದಿದ್ದರಿಂದ ಆತನಿಗೆ ಕರೆ ಮಾಡಿ ಅಲ್ಲಿಗೆ ಹೋದೆವು ಆತ ಇದ್ದ ಸ್ಥಳ ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ನಲ್ಲಿ ಅಲ್ಲಿ ಹೋದ ನನಗೆ  ಮೊದಲೇ ಎದುರಾಗಿತ್ತು shock ಅವರಿದ್ದ ರೂಮ್  ಯಾವತರದಲ್ಲಿಯೂ ಮನೆಯ ತರಹ ಕಾಣಲೇ ಇಲ್ಲ  ನಮ್ಮನೆಯ ಸಗಣಿ ಬಳೆದ ನೆಲವಾದರು ಚೂರೂ ಚೆನ್ನಾಗಿರುತ್ತಿತ್ತೇನೋ ಆದರೆ ಅಲ್ಲಿನ ಮುರಿದು ಒಡೆದು ಹೋದ ಟೈಲ್ಸ್ ನಿಂದ ನೆಲವನ್ನ ಮಾಡಲಾಗಿತ್ತು ಚಿಕ್ಕ ಕೊಣೆ ಅದ್ರಲ್ಲಿ ಒರಟು ಜನ ಅಂದೆ ನನಗನ್ನಿಸಿತು ನನ್ನುರೆ ಚಂದ ನಮ್ಮೂರಿನ ಜನರೇ ಮೃದುಸ್ವಭಾವದವರೆಂದು. ಆದರೂ ಮನೆಯಲ್ಲಿಯೇ ಇರಬೇಕಾದ ಪರಿಸ್ಥಿತಿ ಹಾಗೆಯೇ ಬೆಳಗ್ಗೆ ಹಲ್ಲುಜ್ಜಲೆಂದು ಸಂದಿಮೂಲೆಯೊಳಗೆ ನುಗ್ಗಿ  ಹೋಗಿ ಕೂತರೆ ನಿಲ್ಲಾಲಾಗದೆ toilet ನೋಡಿ  ಬೆಂಗಳೂರು ಜೀವನಕ್ಕೆ ಅರ್ಧ ತಲ್ಲಣವಾಗಿ ಹೋದೆನು ಕೇವಲ ಬೆಂಗಳೂರು ತಲುಪಿ  ಮೂರ್ನಾಲ್ಕು ಘಂಟೆಯೊಳಗೆ ಸುಸ್ತಾಗಿ ಹೋಗಿದ್ದೇ ಹಾಗೆಯೇ ಅಲ್ಲಿಂದ  ಹೊಂಟಿದ್ದೆ ನಮ್ಮ ಪಯಣ ಉದ್ಯೋಗ ಗಿಟ್ಟಿಸಿಕೊಳ್ಳುವತ್ತ, ಕೆಲಸಕ್ಕಾಗಿ ರಣಹದ್ದುಗಳಂತೆ ಊರುಬಿಟ್ಟು ಬೆಂಗಳೂರಿಗೆ ಬಂದ ನಮಗೆ ಕುಳ್ಳಪ್ಪ ಸರ್ಕಲ್ ಬಳಿ ಕೆಲಸದ interview ಗೆ ಬರಲು ಹೇಳಿದರು ನಾವು ಕುಮಾರಸ್ವಾಮಿ layout ನಿಂದ ಹೊರಟ ನಮಗೆ ಮಜೆಸ್ಟಿಕ್ ತಲುಪುವುದರೊಳಗೆ ಮಧ್ಯಾಹ್ನನದ ಸಮಯವಾಗಿ ಹೋಗಿತ್ತು, ನಮ್ಮೂರು ತೀರ್ಥಹಳ್ಳಿಯಲ್ಲಿ ಶಿವಮೊಗ್ಗಕ್ಕೆ 1 ಗಂಟೆಯಲ್ಲಿ ತಲುಪುತಿದ್ದ ನನಗೆ ಬೆಂಗಳೂರಿನ ವಾಹನ ದಟ್ಟಣೆ ಹುಚ್ಚಿಡಿಸಿದಂತೂ ನಿಜ.ಅಲ್ಲಿನ ಜನರು ಹಾಗೆಯೇ ಕಿವಿಯಲ್ಲಿ ear ಫೋನ್ ಸಿಕ್ಕಿಸಿಕೊಂಡು ಅಲ್ಲಿನ ಜೀವನಕ್ಕೆ ready ಆಗಿಯೇ ನಿಂತಿರುತ್ತಾರೆ ಆದರೆ ಅದು ನನ್ನಿಂದ ಸಾಧ್ಯವಿರಲಿಲ್ಲ, ಹಾಗೋ ಹೀಗೊ ಕೋಸಾರಿಡಿಕೊಂಡು  ಅಪರಾಹ್ನ 3.30 ರ ಸಮಯಕ್ಕೆ ಇಂಟರ್ವ್ಯೂ ಅಟೆಂಡ್ ಮಾಡಿ ಕೆಲಸವನ್ನು ಗಿಟ್ಟಿಸಿಕೊಂದಿದ್ದು ಆಯಿತು ಆದ್ರೆ 3.30  ಆದ್ದರಿಂದ ಹೊಟ್ಟೆ ಚುರುಗುಟ್ಟಲು ಶುರುವಾಗಿತ್ತು ಬೆಂಗಳೂರಿನ ದುಬಾರಿ ದುನಿಯದಲ್ಲಿ ಒಳ್ಳೆಯ ಹೋಟೆಲ್ ಹೋಗಿ ತಿನ್ನುವ ಪರಿಸ್ಥಿತಿ ನಮ್ಮದಾಗಿರಲಿಲ್ಲ ಅಲ್ಲಿಯೇ ದಾರಿಯ ಬದಿಯಲ್ಲಿ ವಾಹನದಲ್ಲಿ ಊಟ ಮಾರಾಟ ಮಾಡಲಾಗುತ್ತಿತ್ತು ಜನವೋ ಜನ ಆ ಊಟ ತಿನ್ನಲು ನಾವು ಹೊಸದು ಚನ್ನಾಗಿರಬಹುದೆಂದು ಹೋದೆವು  ಹಾಗೂ 50 ರೂಪಾಯಿ ನೀಡಿ ಊಟ ತಗೊಂಡೆವು ತಗೊಂಡು ಮೊದಲ ತುತ್ತು ಇಟ್ಟವನಿಗೆ ಅಮ್ಮನಿಗೆ ಉಪ್ಪು ಜಾಸ್ತಿ ಚಪ್ಪೆ ಕಾರ ಹುಳಿ ಅಂದದೆಲ್ಲ ನೆನಪಾಯಿತು ಜಗಳ ಕಿತ್ತದೆಲ್ಲಾ ಕಣ್ಣ ಮುಂದೆ ಬರತೊಡಗಿತು ಕಾರಣ ನಾವು ತಿಂದದರಲ್ಲಿ  ಅದ್ಯಾವುದೂ ಇರಲಿಲ್ಲ. ಮನೆಯಲ್ಲಿ ನಾನು ಮಣೆಯನ್ನ ಹಾಕಿ ನೆಲದಲ್ಲಿ ಕೂತು ಆರಾಮಗಿ ಊಟ ಮಾಡುತ್ತಿದ್ದ ನನಗೆ ಬೀದಿಯಲ್ಲಿ ನಿಂತು ಉಣ್ಣಲು ಮುಜುಗರವಾಗಿದಂತೂ ನಿಜ.. ನಮ್ಮೂರು ತೀರ್ಥಹಳ್ಳಿಯಲ್ಲಿ ಬೀದಿಯಲ್ಲಿ ನಿಂತು ಊಟ ಮಾಡುವವರು ಬ್ಯಾಟರಿ ತೆಗೆದು ಹುಡುಕಿದರು ಸಿಗುವುದು ಕಷ್ಟ. ಅದೇ ಐವತ್ತು ರೂಪಾಯಿಗೆ ನಮ್ಮೂರಿನ ಹೋಟೆಲ್ ನಲ್ಲಿ ac ಹಾಕಿಸಿ ಕುಷ್ಕ ತಿನ್ನುತ್ತಿದ್ದದೆಲ್ಲ ನೆನಪಾಗುತ್ತಿತ್ತು ಕೊಳಚೆ ರಸ್ತೆ, ನಾವು ಮಲೆನಾಡಿಗರು ಮಣ್ಣಿನಲ್ಲಿಯೇ ಬಿದ್ದು ಹೊರಲಾಡಿದರು ಅಷ್ಟು ಚಂದದ ಮಣ್ಣಿನಲ್ಲಿ  ಇದ್ದ ನನಗೆ ಆ ಬೆಂಗಳೂರಿನ ಮಣ್ಣಿನ ಮೇಲೆ ಕಾಲಿಡಲು ಕಷ್ಟವಾಗುತ್ತಿತ್ತು ಎಲ್ಲೋ ಪ್ಯಾಂಟ್ ಗೆ ಹಿಂದೇ ಇಂದ ಹಾರಿದ್ದ  ಕೆಸರು  ಮಣ್ಣು ಅಂತ ಊಹಿಸಲು ಕಷ್ಟವಾದ ಪರಿಸ್ಥಿತಿಗೆ ಕೊಳಚೆ ಮಿಶ್ರಿತವಾಗಿ ಹೋಗಿತ್ತು  ಇಷ್ಟೆಲ್ಲ ಆಗುವ ಹೊತ್ತಿಗೆ  ಸಂಜೆ ಸಂಜೆ ಆಗುತ್ತಾ ಬಂದಿತ್ತು ಅಷ್ಟ್ತೊತ್ತ್ಗಾಲೇ ಮನಸು ಮನೆಕಡೆ ಹೊರಡಲು ಸಿದ್ಧವಾಗಿತ್ತು  ಕಾಲು ಕೀಳಲು ರೆಡಿ ಆಗಿತ್ತು, ಇಷ್ಟೆಲ್ಲ ಹೇಳಿದಕ್ಕೂ ನಂದು ತೀರ್ಥಹಳ್ಳಿ ಅಂದಿದಕ್ಕೂ ಏನು ಸಂಬಂಧ ಅಂದ್ಕೊಬಿಟ್ರಾ?
ನಂದು
ತೀರ್ಥಹಳ್ಳಿ ಯಾಕೆ ಗೊತ್ತ ಅಲ್ಲಿ

ಸ್ವಚ್ಛಂದವಾಗಿ ಹಾರಡಬಲ್ಲೆ.
ಮನಬಿಚ್ಚಿ ಎಲ್ಲೆಡೆಯೂ ಕನ್ನಡ ಮಾತಡಬಲ್ಲೆ.
ತಲೆ ಎತ್ತಿ ನಡೆಯಬಲ್ಲೆ,
ನಮ್ಮವರ ನಡುವೆ ಸಹಬಾಳ್ವೆ ಅರಿತು ಸಾಗಬಲ್ಲೆ.
ಶುದ್ಧಗಾಳಿ ಸೇವಿಸಬಲ್ಲೆ,
ಕೃಷಿ ಪಾಠ ಅರಿತು ಪೃಕೃತಿಯ ಮಾತಾನಾಡಿಸಬಲ್ಲೆ.

ತೀರ್ಥಹಳ್ಳಿಯಿದು ನನ್ನದಿದು
ಮಲೆನಾಡ ಹೆಬ್ಬಾಗಿಲಿದು ನಮಗೆಲ್ಲರಿಗೂ ಹೆಮ್ಮೆಯಿದು.
 
ನಾಕಾಣಿಯ ಶುಂಠಿ ಪೇಪರಿನಲ್ಲಿ ನಲ್ಲಿ
ಹಂಚಿ ತಿಂದವರು ನಾವು.
ಹುರುಳಿಕಟ್ಟು ಸಾರಿನಲ್ಲಿ ಕಡುಬು
ನುರಿದವರು ನಾವು.
ಚಾಟ್ರಿ ಬಿಲ್ಲು ಹಿಡಿದು
ಗುರಿಇಟ್ಟವರು ನಾವು,
ನೇರಳೆ ಮರದಲ್ಲಿ ನೆರಳೆಹಣ್ಣ
ಕಿಟ್ಟವರು ನಾವು,
ಹೆಬ್ಬಾಲಿಸಿನ ಕಾಯಿನ ಹುಲುಗೊಂಬೆಯಡಿ
ಹಣ್ಣಿಗೆ ಇಟ್ಟವರು ನಾವು.

ಖುಷಿಯ ಕಂಡವರು ನಾವು.
ನಿಂತು ಉಣ್ಣದವರು ನಾವು.
ಸಭ್ಯತೆಯ ಸಮಾಜದವರು ನಾವು.
ತೀರ್ಥಹಳ್ಳಿಯವರು ನಾವು.

ತೀರ್ಥಹಳ್ಳಿಯಿದು ನನ್ನದಿದು
ಮಲೆನಾಡ ಹೆಬ್ಬಾಗಿಲಿದು ನಮಗೆಲ್ಲರಿಗೂ ಹೆಮ್ಮೆಯಿದು.



ಜೀವನ್ ಮೃತ್ಯು ! ಕೊರೊನ ನಡುವೆ ಬದುಕು ಹೇಗೆ

ಸ್ನೇಹಿತರೇ, ನಮಗೆ ತಿಳಿದಿರುವ ಹಾಗೇ ಈ ಜಗತ್ತಿನಲ್ಲಿ ನಾವು ಊಹೆಗೂ ನಿಲುಕಿಸದ ಪರಿಸ್ಥಿತಿ ಬಂದೊದಗಿದೆ. ಕಾಲವು ಚಲಿಸುತ್ತಲೇ ಇದೆ ಆದರೆ ಈ ಕಾಲವನ್ನು ಕಣ್ಣಿ...