Wednesday 7 February 2018

ನಾವು ತೀರ್ಥಹಳ್ಳಿಯವರು

ನಾವು ಅಂತವರು
ಹೃದಯಸ್ಪರ್ಶಿ ಗುಣದವರು
ಎದೆಯುಬ್ಬಿಸಿ ನಡೆಯುವವರು
ಬದುಕುವ ಛಲದವರು
ಎಲ್ಲರೂ ನಮ್ಮವರು
ನಾವು ತೀರ್ಥಹಳ್ಳಿಯವರು..

ಹಳ್ಳಿಯ ಸೊಬಗಿಗೆ
ಪಟ್ಟಣದ ಚಮತ್ಕಾರ.
ಚಿಗುರೋಡೆದು ನಿಂತಿದೆ
ಕೌಶಲ್ಯದ ಸಾಕ್ಷಾತ್ಕಾರ.
ಹಳ್ಳಿಯಿಂದ ದಿಲ್ಲಿಗೆ
ಮನಮುಟ್ಟಿದ ಗೋಪಾಲಗೌಡರು.

ಹಚ್ಚ ಹಸಿರಿನ ಸೊಬಗಿದು
ಸಮೃದ್ಧತೆಯ ನಾಡಿದು.
ಕುವೆಂಪು ಬರೆದದ್ದು
ವಿಶ್ವಮಾನವ ಸಂದೇಶವದು.
ಅಬಚೂರಿನ ಪೋಸ್ಟ್ ಆಫೀಸು
ಪೂರ್ಣಚಂದ್ರ ತೇಜಸ್ವಿ ಕಂಡದ್ದು.

ಆಗುಂಬೆಯ ಮನೆಯಿದು
ಬಿದನೂರ  ಧರೆಯಿದು
ಮಾರಿಚವಧಿಸಿ ಮೃಗವಧೆಯಿದು.
ಭುವನಗಿರಿಯ ಭವ್ಯತೆಯಿದು
ಕುಪ್ಪಳ್ಳಿಯ ಕವಿಕುಟಿರವಿದು
ಪರಶುವಿನ ತೀರ್ಥರಾಜಪುರವಿದು.

ಗುಬ್ಬಚ್ಚಿಯ ಗೂಡದು
ಪರಿಶ್ರಮದ ಫಲವದು
ನಮ್ಮೆಲ್ಲರ ಮಾತದು
ಎದೆಯ ಬಡಿತವದು
ರೋಮಾಂಚನ ನಮ್ಮೂರದು
ಹೆಮ್ಮೆಯ ತೀರ್ಥಹಳ್ಳಿಯದು.

ನಾವು ಅಂತವರು
ಹೃದಯಸ್ಪರ್ಶಿ ಗುಣದವರು
ಎದೆಯುಬ್ಬಿಸಿ ನಡೆಯುವವರು
ಬದುಕುವ ಛಲದವರು
ಎಲ್ಲರೂ ನಮ್ಮವರು
ನಾವು ತೀರ್ಥಹಳ್ಳಿಯವರು.

ನಿಮ್ಮ
        ಸಂಕೇತ ಜಿ ಎಮ್ ತೀರ್ಥಹಳ್ಳಿ

No comments:

Post a Comment

ಜೀವನ್ ಮೃತ್ಯು ! ಕೊರೊನ ನಡುವೆ ಬದುಕು ಹೇಗೆ

ಸ್ನೇಹಿತರೇ, ನಮಗೆ ತಿಳಿದಿರುವ ಹಾಗೇ ಈ ಜಗತ್ತಿನಲ್ಲಿ ನಾವು ಊಹೆಗೂ ನಿಲುಕಿಸದ ಪರಿಸ್ಥಿತಿ ಬಂದೊದಗಿದೆ. ಕಾಲವು ಚಲಿಸುತ್ತಲೇ ಇದೆ ಆದರೆ ಈ ಕಾಲವನ್ನು ಕಣ್ಣಿ...