Monday 5 April 2021

ದಯವಿಟ್ಟು ಗಮನಿಸಿ !! ರಾಜ್ಯದಲ್ಲಿ ನಾಳೆ ಇಂದ ಮಳೆಯಂತೆ!?

ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ಸೂಚಿಸಿದ್ದು ಏಪ್ರಿಲ್ 6 ರಿಂದ 10 ರ ವರೆಗೆ ಅಲ್ಲಲ್ಲಿ ಮಳೆಯಾಗಲಿದೆ ಎಂದಿದ್ದಾರೆ.

ಏಪ್ರಿಲ್ 6 ರಂದು ಮೈಸೂರು, ಹಾಸನ, ಕೊಡಗು, ಚಾಮರಾಜನಗರ, ಚಿಕ್ಕಮಗಳೂರು ಜಿಲ್ಲೆಗಳ ವ್ಯಾಪ್ತಿಯಲ್ಲಿ ಮಳೆಯಾಗಲಿದೆ.

ಏಪ್ರಿಲ್ 7 ರಂದು ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಮತ್ತು ದಕ್ಷಿಣ ಒಳನಾಡು ಭಾಗದ ಚಾಮರಾಜನಗರ, ಹಾಸನ, ಮೈಸೂರು, ಕೊಡಗು ಭಾಗದಲ್ಲಿ ಮಳೆಯಾಗಲಿದೆ.

ಏಪ್ರಿಲ್ 8 ರಂದು ಕರಾವಳಿ ಹಾಗೂ ಮಲೆನಾಡಿನ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ, ಮೈಸೂರು, ಕೊಡಗು, ಹಾಸನದಲ್ಲಿ ಮಳೆಯಾಗಲಿದೆ.

ಏಪ್ರಿಲ್ 9 ರಂದು ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಧಾರವಾಡ, ಕಲಬುರಗಿ, ಬೆಳಗಾವಿ, ಶಿವಮೊಗ್ಗ, ಮೈಸೂರು, ಕೊಡಗು, ರಾಯಚೂರು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳ ವ್ಯಾಪ್ತಿಯಲ್ಲಿ ಮಳೆಯಾಗಲಿದೆ.

ಏಪ್ರಿಲ್ 10 ರಂದು ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಕಲಬುರಗಿ, ರಾಯಚೂರು, ಚಿಕ್ಕಮಗಳೂರು, ಶಿವಮೊಗ್ಗ, ಮೈಸೂರು, ಕೊಡಗು, ಹಾಸನ, ಚಿಕ್ಕಮಗಳೂರು, ಬೆಳಗಾವಿ, ಧಾರವಾಡ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ.

ಏಪ್ರಿಲ್ 7 ರವರೆಗೆ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಮೂರು ದಿನಗಳ ಕಾಲ ಒಣಹವೆ ಇರಲಿದೆ ಎಂದು ಹೇಳಲಾಗಿದೆ.

ಧರೆಗೆ ಮಳೆಯ ಸಿಂಚನದಿಂದ ಬಿಸಿಲ  ಬೆಗೆಯಿಂದ ಕಂಗೆಟ್ಟಿದ್ದ ಜನಕ್ಕೆ ಕೊಂಚ ಕೂಲ್ ಅನುಭವ ಆಗುವುದಂತೂ ಸುಳ್ಳಲ್ಲ.!



Saturday 3 April 2021

ಕ್ರಿಕೆಟ್ ಅಭಿಮಾನಿಗಳಿಗೆ ಶಾಕ್ ! ಹೀಗಾದ್ರೆ ಐಪಿಎಲ್ ಕಥೆ ಮುಂದೇನು!!??

ಹೌದು ವಿಶ್ವದಲ್ಲೇ ಅತಿ ಶ್ರೀಮಂತಿಕೆಯ ಹಾಗೂ ವರ್ಣರಂಜಿತ ಕ್ರಿಕೆಟ್ ಟೂರ್ನಮೆಂಟ್ ಗಳ ಅಗ್ರಸ್ಥಾನದಲ್ಲಿ ನಮ್ಮೆಲ್ಲರ ತರ್ಕಕ್ಕೆ ಬರುವುದು ಐಪಿಎಲ್, ಇನ್ನೇನು ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇರುವಾಗಲೇ ಶಾಕ್ ಮೇಲೆ 
ಶಾಕ್!! ಐಪಿಎಲ್ ಗೆ ವಿಘ್ನ ಎದುರಾಗಿದೆ. ಎರಡು ದಿನಗಳ ಹಿಂದಷ್ಟೇ ಕ್ರಿಕೆಟ್ ಗಾಡ್ ಸಚಿನ್ ಕೊರೊನ ಸೋಂಕಿಗೆ ಒಳಗಾಗಿದ್ದ ಸುದ್ದಿ ಕೇಳಿದ್ದೆವು ಇದೀಗ ಡೆಲ್ಲಿ ಕ್ಯಾಪಿಟಲ್ ತಂಡದ ಸಹ ಆಟಗಾರ  ಅಕ್ಷರ್ ಪಟೇಲ್ ಗು ಸೋಂಕು ತಗುಲಿದ್ದು ಆರಂಭದಲ್ಲೇ ವಿಘ್ನ ಎದುರಾಗಿದೆ.
ವಾಂಖೆಡೆ ಸ್ಟೇಡಿಯಂ ನ 16 ಮಂದಿ ಕೆಲಸ ನಿರ್ವಾಹಕರಿಗೂ ಸೋಂಕು ತಗುಲಿದ್ದು ಐಸೋಲೇಶನ್ ನಲ್ಲಿರಿಸಲಾಗಿದೆ, ಈಗ ಕೊರೊನ ಐಪಿಎಲ್ ಮೇಲೆ ದಾಳಿ ಮಾಡುವುದಾಗಿ ಸೂಚನೆ ರವಾನಿಸಿದೆ.
ಚೆನ್ನೈ ತಂಡದಲ್ಲೂ ಕೇಸ್‌!!
ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಸದಸ್ಯರೊಬ್ಬರಿಗೆ ಕೊರೊನಾ ತಗುಲಿರುವುದು ವರದಿಯಾಗಿದೆ. ಸಿಎಸ್‌ಕೆಯ ತಾಂತ್ರಿಕ ವಿಭಾಗದ ಸದಸ್ಯರೊಬ್ಬರಲ್ಲಿ ಪಾಸಿಟಿವ್‌ ಕಂಡುಬಂದಿದೆ. ಸೋಂಕಿತ ವ್ಯಕ್ತಿ ಯಾವುದೇ ಆಟಗಾರರ ಅಥವಾ ತಂಡ ಸಿಬಂದಿಯ ಸಂಪರ್ಕ ಹೊಂದಿಲ್ಲ ಎಂದು ಸಿಎಸ್‌ಕೆ ಪ್ರಾಂಚೈಸಿ ಖಾತ್ರಿಪಡಿಸಿದೆ.

ಮತ್ತೆ ದೇಶಾದ್ಯಂತ ಕೊರೊನ 2ನೆ ಅಲೆ ಸ್ಫೋಟಗೊಂಡಿದ್ದು ದೇಶದ ಜನರಲ್ಲಿ ಮತ್ತು ಕ್ರಿಕೆಟ್ ಅಭಿಮಾನಿಗಳಲ್ಲಿ ಆತಂಕ ಹೆಚ್ಚಾಗಿದೆ.

ಅಪ್ಪು ಫ್ಯಾನ್ಸ್ ಆತಂಕ!! ಯುವರತ್ನ!! ಕೋರೊನ!! ಸರ್ಕಾರ!???

ಏಪ್ರಿಲ್ ಒಂದರಂದು ಪವರ್ ಸ್ಟಾರ್ ಪುನಿತ್ ರಾಜ್ ಕುಮಾರ್ ಅಭಿನಯದ ಯುವರತ್ನ ತೆರೆಕಂಡಿದ್ದು, ಎಲ್ಲೆಡೆ ಅತೀ ಉತ್ತಮ ಪ್ರತಿಕ್ರಿಯೆ ಪಡೆದಿದ್ದು ಕೊರೊನ ಕಾರಣದದಿಂದ ಕೊಂಚ ಹಿನ್ನಡೆ ಅನುಭವಿಸಿದ್ದ ಚಿತ್ರೋದ್ಯಮ ಈಗ  ಕೊಂಚ ವೇಗ ಕಂಡುಕೊಂಡ ಸಮಯದಲ್ಲೇ ಮತ್ತೆ ರಾಜ್ಯದಲ್ಲಿ ಕೊರೊನಾರ್ಭಟ ಹೆಚ್ಚಾದ ಕಾರಣ ನಿನ್ನೆ ಸರ್ಕಾರ ಮತ್ತೆ ಚಿತ್ರಮಂದಿರದ ಸೀಟುಗಳ ಭರ್ತಿ ಕೇವಲ 50 ಪ್ರತಿಶತಕ್ಕೆ ಇಳಿಸಾಲಾಗಿತ್ತು.  ಎಲ್ಲೆಡೆ ಅಸಮಾಧಾನ ಹೊರ ಹಾಕಿದ್ದರು. ಶಿವರಾಜ್ ಕುಮಾರ್ ಮತ್ತು ನಾಗತಿಹಳ್ಳಿ ಚಂದ್ರ ಶೇಖರ್ ಸರ್ಕಾರದ ನಿರ್ಧಾರವನ್ನು ಟ್ವಿಟರ್ ನಲ್ಲಿ  ವಣಿಜ್ಯ ಮಂಡಳಿಯ ಮನವಿಯನ್ನು ಸ್ವೀಕರಿಸಿರುವ ಸರ್ಕಾರ ಏಪ್ರಿಲ್ 7 ರ ವರೆಗೆ ನಿರ್ಬಂಧ ಸಡಿಲಿಕೆ ಮಾಡಿದೆ. ಈ ಮೂಲಕ ಮೂರು ದಿನಗಳ ಕಾಲ ನಿರ್ಬಂಧ ಸಡಿಲಿಕೆ ಮಾಡಿರುವ ಸರ್ಕಾರ, ಏಪ್ರಿಲ್ 6 ರ ಮಧ್ಯರಾತ್ರಿವರೆಗೆ ನಿರ್ಬಂಧ ಸಡಿಲಿಕೆ ಮಾಡಿದೆ. 
ಸದ್ಯ ಸರ್ಕಾರದ ಈ ನಿರ್ಧಾರದಿಂದ ಅಪ್ಪು ಅಭಿಮಾನಿಗಳು ಹಾಗೂ ಚಿತ್ರಪ್ರೇಮಿಗಳು ಕೊಂಚ ನಿರಾಳರಾಗಿದ್ದಾರೆ.

Friday 2 April 2021

ಕನ್ನಡಿಗರ ಹೃದಯ ಗೆದ್ದ ಅಪ್ಪು! ಶೇಕಡ 99 ರಷ್ಟು ಸ್ವಚ್ಛ ಸಿನಿಮಾ : ಯುವರತ್ನ!!

ಏಪ್ರಿಲ್ 1 ಕ್ಕೆ ರಾಜ್ಯಾದ್ಯಂತ ತೆರೆಗೆ ಅಪ್ಪಳಿಸಿರುವ ಸಂತೋಷ್ ಆನಂದ್ ರಾಮ್ ನಿರ್ದೇಶನದ ಪುನೀತ್  ರಾಜ್ ಕುಮಾರ್  ಪ್ರಕಾಶ್ ರೈ ಅಚ್ಯುತ್ ಕುಮಾರ್ ಪ್ರಕಾಶ್ ಬೆಳವಾಡಿ ಸಯೇಶ ಕಲಾವಿದರ ದಂಡೇ ಅಭಿನಯಿಸಿರುವಂತ ಯುವರತ್ನ ಚಿತ್ರ  ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ದೊರೆತಿದ್ದು ಮತ್ತೊಮ್ಮೆ ಪುನೀತ್ ರ ಖಾತೆ ಇಂಡಸ್ಟ್ರಿ ಹಿಟ್ ಸೇರುವುದು ಖಚಿತ. 

ಒಂದೊಳ್ಳೆ ಸಂದೇಶ ಹೊತ್ತು ತಂದಿರುವ ಈ ಚಿತ್ರ ವಿದ್ಯಾರ್ಥಿ ಜೀವನದಲ್ಲಿ ಓದಿನ ಜೊತೆಗೆ  ಕಲೆ ಸಾಹಿತ್ಯ ಕ್ರೀಡೆಗಳು ಜೀವನ ರೂಪಿಸುತ್ತವೆ ವಿದ್ಯಾರ್ಥಿಗಳ ಆಸಕ್ತಿಗೆ ಬೆಂಬಲ ಕೊಡಬೇಕು ಅನ್ನುವುದರ ಜೊತೆಗೆ  ಹೇಗೆ ಖಾಸಗಿ ಶಿಕ್ಷಣ ಸಂಸ್ಥೆಗಳು ಶಿಕ್ಷಣವನ್ನ ವ್ಯಾಪಾರಿಕರಣ ಗೊಳಿಸಿವೆ ಎನ್ನುವುದನ್ನ ತೋರಿಸುತ್ತ  ವಿದ್ಯಾರ್ಥಿಗಳು ಹೇಗೆ drugs ಗೆ ಅಡಿಕ್ಟ್ ಆಗ್ತಾ ಇದಾರೆ ಎನ್ನುವುದನ್ನ ಎಳೆ ಎಳೆಯಾಗಿ ಹೇಳ್ತಾ ಗುರುವಿನ ಮಹತ್ವ ತಿಳಿಸುತ್ತಾ ಹೋಗುತ್ತದೇ.

ಹೀರೊ ಸರ್ಕಾರಿ ಕಾಲೇಜನ್ನ ಉಳಿಸುವ ಸಲುವಾಗಿ ಹೇಗೆ ವ್ಯವಸ್ಥೆಯ ವಿರುದ್ದ ಹೊರಡುತ್ತಾನೆ ಎನ್ನುವುದೇ ಒಂದೆಳೆ ಕಥೆ ಹಾಗೆ ಇಲ್ಲಿ ಪುನೀತ್ ಜೊತೆಗೆ ಮತ್ತೊಬ್ಬ ಹೀರೊ ಇದ್ದು ಅವರೇ ಪ್ರಕಾಶ್ ರಾಜ್ ತಮ್ಮ ಅಮೋಘ ಅಭಿನಯದಿಂದ ಎಲ್ಲರ ಮನಸ್ಸು ಗೆಲ್ಲುವುದರಲ್ಲಿ ಸಂಶಯವಿಲ್ಲ. ಹೀರೋಯಿನ್ ಸಯೇಶ ಪಾತ್ರ ಚೆನ್ನಾಗಿದ್ದು ಅಂತಹದ್ದೇನು ಮಹತ್ವತೆ ಪಾತ್ರಕಿಲ್ಲ..ತಮನ್ ಉತ್ತಮ ಸಂಗೀತ ನೀಡಿದ್ದು ಚಿತ್ರದ್ದುದ್ದಕ್ಕೂ ಪ್ರೇಕ್ಷಕರರನ್ನ ಹಿಡಿದು ಕೂರಿಸುತ್ತದೆ . ಅಲ್ಲಲ್ಲಿ ಶಿವಾರಾಜ್ ಕುಮಾರ್ ರೆಫರ್ನ್ಸ್ ರಾಜಕುಮಾರ್ ರೆಫರೆನ್ಸ್ ಇರೋ ಡೈಲಾಗ್ ಗಳು  ಶಿಳ್ಳೆ ಗಿಟ್ಟಿಸಿಕೊಳ್ಳುತ್ತವೆ. 

ನೀವೊಬ್ಬರು 
 ಉತ್ತಮ ಸಂದೇಶವುಳ್ಳ ಕುಟುಂಬ ಸಮೇತರಾಗಿ ನೋಡಬಹುದಂತಹ ಯಾವುದೇ ನಾನ್ ವೆಜ್ ಜೋಕ್ ಗಳು ಇಲ್ಲದಂತ ಫ್ಯಾಮಿಲಿ ಪ್ಯಾಕೇಜ್ ಸಿನಿಮಾದ ಪ್ರೇಮಿಗಳಾಗಿದ್ದರೆ ಇನ್ನೇಕೆ ತಡ  .....



#Sanketha Gm Thirthahalli

ಜೀವನ್ ಮೃತ್ಯು ! ಕೊರೊನ ನಡುವೆ ಬದುಕು ಹೇಗೆ

ಸ್ನೇಹಿತರೇ, ನಮಗೆ ತಿಳಿದಿರುವ ಹಾಗೇ ಈ ಜಗತ್ತಿನಲ್ಲಿ ನಾವು ಊಹೆಗೂ ನಿಲುಕಿಸದ ಪರಿಸ್ಥಿತಿ ಬಂದೊದಗಿದೆ. ಕಾಲವು ಚಲಿಸುತ್ತಲೇ ಇದೆ ಆದರೆ ಈ ಕಾಲವನ್ನು ಕಣ್ಣಿ...