Tuesday 5 December 2017

ಯವ್ವನ (10 to degree)

ಪ್ರಸಾದ್ ಮೊದಲನೇ ದಿನ ಕಾಲೇಜು ಮೆಟ್ಟಿಲು ಏರಿದವನಿಗೆ ಏನೋ ಒಂದು  ಉಲ್ಲಾಸ ಆಸಕ್ತಿ, ಚನ್ನಾಗಿ ಓದಿ ಕೊಂಡು ಮುಂದೆ ಬರಬೇಕು ಎಂದು ದೃಢ ಸಂಕಲ್ಪ ಮಾಡಿಕೊಂಡು ಮುಂದಿನ ಹೆಜ್ಜೆ ಇಟ್ಟು  ಮೂರ್ನಾಲ್ಕು ದಿನ ಕಾಲೇಜಿಗೆ ಹೋದ. ನಂತರದ ದಿನಗಳಲ್ಲೇ ಸಹಜವಾಗಿ ಕಾಲೇಜಿನಲ್ಲಿ ಒಂಟಿಯಾಗಿದ್ದ ಅವನಿಗೆ ಹೊಸ ಗೆಳೆಯರ ಸಂಪರ್ಕ ವಾಯಿತು ಅವರೆಲ್ಲರೂ ಸಹಜವಾಗಿಯೇ ನಗರ ಪ್ರದೇಶದಲ್ಲಿ ಓದಿದ್ದಂತಹ ವಿಧ್ಯಾರ್ಥಿಗಳು ಆದರೆ ನಮ್ಮ ಪ್ರಸಾದ್ ಗ್ರಾಮೀಣ ಪ್ರದೇಶದಲ್ಲಿ ಓದಿದ್ದಂತಹ ವಿದ್ಯಾರ್ಥಿ. ಕ್ರಮೇಣ ಪ್ರಸಾದ್ಗೆ ಅವರೊಂದಿಗೆ ಸಹಜವಾಗಿ ಗೆಳೆತನ ಬೆಳೆಯಿತು ಅವರೆಲ್ಲರೂ ಪಿಯುಸಿ ಗೆ ಬಂದಾಗಲೇ ಕೈಯಲ್ಲಿ  ಮೊಬೈಲ್ ಫೋನ್ ಗಳನ್ನು ಹಿಡಿದು ಬರುತ್ತಿದ್ದರು,ಗ್ರಾಮೀಣ ಭಾಗದಿಂದ ಬಂದ ಪ್ರಸಾದ್ ಮನೆಯಲ್ಲಿ ಕಾಡಿ ಬೇಡಿ ಹಟ ಮಾಡಿ ಅಪ್ಪ ಅಮ್ಮನ ಬಳಿ ಕಿರುಚಾಡಿ ಎರಚಾಡಿ ಒಂದು android ಮೊಬೈಲ್ ತನ್ನದಾಗಿಸಿಕೊಂಡ. ನಂತರ ಪ್ರಸಾದ್ ಗೆ  ಕಾಲೇಜಿನ ಸ್ನೇಹಿತರು facebook ನ ಬಳಸೋದಾಗಿ ತಿಳಿದು ಕೊಂಡು ಈತನು facebook ಖಾತೆ ತೆರದನು  ಆದರೆ ಬಳಕೆ ಬಾರದೆ posword ಮರೆತು account    ಹೋಗಿತ್ತು. ಆ ಸುಸಂದರ್ಭದಲ್ಲಿ ಪರಿಚಯವಾದವನೆ  ನೀರಜ್ ಈತ ಒಬ್ಬ ಮಹಾನ್ ಬುದ್ಧಿಜೀವಿಯಂತೆ ಗೋಚರವಾದ ಪ್ರಸಾದ್ ಗೆ, ಪ್ರಸಾದ್ ಹೆಚ್ಚು ಹೆಚ್ಚು ಸ್ನೇಹವನ್ನು ಬಯಸಿ ನೀರಜ್ ಬಳಿ ಸೇರಿದ ಅವರಿಬ್ಬರ ಸ್ನೇಹ ಅಗಾಧವಾಗಿ ಬೆಳೆದು ಒಂದು ದಿನ ನೀರಜ್ facebook ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿ  ಹೊಸದದಾಂತಹ facebook ಖಾತೆಯನ್ನು ತೆರೆದು ಕೊಟ್ಟ.ಕೊನೆಗೆ facebook ಗೆ ಸೇರಿ ನಾಲ್ಕು ಐದು ದಿನಗಳಲ್ಲೇ facebook ನಲ್ಲಿ  ಅಧಿಪತ್ಯ ಸಾಧಿಸಿದ್ದ ಪ್ರಸಾದ್.. ಆಗೇನು ಚಿಕವಯಸ್ಸು ಪ್ರಸಾದ್ ಗೆಳೆಯ ನೀರಜ್ ಮತ್ತು  ಪ್ರಸಾದ್ ಗೆ facebook ನಲ್ಲಿ ಸಮರಕ್ಕೆ ಕಣ ಏರ್ಪಾಡಾಯಿತು ಕಾರಣ ಪ್ರಸಾದ್ ನೀರಾಜ್ ನ facebook ನಲ್ಲಿದ್ದ ಹುಡ್ಗಿಗೆ message ಮಾಡಿದ್ದ. ಇಬ್ಬರ ನಡುವೆ ಉತ್ತಮ ಸ್ನೇಹವಿದ್ದರು ಕೂಡ ಒಳಗೊಳಗೇ ಇಬ್ಬರು ಕತ್ತಿಮಸೆಯ ತೊಡಗಿದ್ದರು ಅವನಿಗೆ ಯಾರಾದ್ರೂ ಹುಡುಗಿ facebook ನಲ್ಲಿ ಫ್ರೆಂಡ್ ಅದರೆ ಆ ಹುಡುಗಿ ನೀರಜ್ ಗೂ ಫ್ರೆಂಡ್ ಇದ್ದರೆ ನೀರಜ್ ಪ್ರಸಾದ್ ಬಗ್ಗೆ ಇಲ್ಲ ಸಲ್ಲದ್ದು ಹೇಳಿ block ಮಾಡಿಸೋದ್ದು ಮಾಡತೊಡಗಿದ್ದ, ಹೀಗೆ ಮುಂದುವರೆದುಕೊಂಡು ಹೋಗತೊಡಗಿತ್ತು ಅವರಿಬ್ಬರ ಗೆಳೆತನ ಮತ್ತೆ ಇಬ್ಬರೂ ಸೆಡ್ಡು ತಟ್ಟಿ ಅತಿ ಹೆಚ್ಚು facebook ಫ್ರೆಂಡ್ ಗಳಿಕೆಯಲ್ಲಿ ಬಿದ್ದಿದ್ದರು ಆಗಿನ ಸಂದರ್ಭದಲ್ಲಿ facebook ನೀರಜ್ ನದ್ದು 20 30 ದಿನ ಬ್ಲಾಕ್ ಆದದ್ದು ಉಂಟು ಆಗಿನ ಸಂದರ್ಭದಲ್ಲಿ ಅತಿ ಹೆಚ್ಚು facebook request ಕಲಿಸುತ್ತಿದ್ದರೆ block ಆಗುತ್ತಿತ್ತು facebook ಖಾತೆ.ಪ್ರಸಾದ್ ಹುಡುಗಿಯರ ಮುಂದೆ ನಿಂತು ಮಾತನಾಡಲು ತುಂಬಾ ಅಂಜಿಕೊಳ್ಳುತ್ತಿದ್ದ ಆದ್ರೆ facebook ನಲ್ಲಿ ದಿನ ಹೋದಂತೆ ಗೆಳೆಯರ ಸಂಪಾದನೆ ಏರಿಸಿಕೊಳ್ಳುತ್ತಾ  ವಾಟ್ಸಾಪ್ ಖಾತೆ ಗೆ ಒಂದೊಂದೇ ಹುಡುಗಿಯರ ನಂಬರ್ ಸೇರಿಸುತ್ತಾ ಬರಲಾರಂಭಿಸಿದ.ಹಾಗೆ ನೀರಜ್ ಸಹ ಆಕರ್ಷಣೆಯ ಬಲೆಗೆ ಬಿದ್ದು ಮನದಲ್ಲೇ ಒದ್ದಾಡ ತೊಡಗಿದ್ದ ಆ ಸಮಯದಲ್ಲಿ ಕಾಲೇಜಿನಲ್ಲಿ ಇದ್ದ ಇತರೆ ಹುಡುಗರು ಅದೇ ಹುಡುಗಿಯ ಮೇಲೆ ವಕ್ರದೃಷ್ಟಿ ಬೀರಿದ್ದನ್ನು ಸಹಿಸಲಾಗದೆ ಹೋಗಿ ಎದುರು ನಿಂತು i love u ಅಂತಾ ಹೇಳಿಯೇ ಬಿಟ್ಟಿದ್ದ ಮನದಲ್ಲಿದ್ದ ಅರಗಿಣಿ ನಂತರದ ದಿನದಿಂದ ಮುಖವನ್ನೇ ತೋರಿಸದಷ್ಟು ದೂರಮಾಡಿಕೊಂಡು puc ಯಲ್ಲೇ ವಿರಹ ಗೀತೆಗೆ ಮುನ್ನುಡಿ ಬರೆದಿದ್ದ.ಹಾಗೆ ದಿನಪೂರ್ತಿ facebook ನಲ್ಲಿ ಕಳೆದರು ಪ್ರಸಾದ್ ಮತ್ತು ನೀರಾಜ್ ಹಾಗೂ ಹೀಗೂ ಒದ್ದಾಡಿ ದ್ವಿತೀಯ ಪಿಯುಸಿ ಯನ್ನು ಮುಗಿಸಿದರು ಆದರೆ ಓದಿನಲ್ಲಿ ಮುಂದಿದ್ದ ಪ್ರಸಾದ್  facebook ಮತ್ತು ಸಹಜವಾಗಿ ವಯಸ್ಸಿನ ಏರಿಳಿತದ ಮೊದಲ ಸೆಳೆತಕ್ಕೆ ಸಿಕ್ಕಿ ಸಾಧಾರಣ ಮಾರ್ಕ್ಸ್ ಪಡೆದು ಉತ್ತೀರ್ಣ ನಾಗಿ ಡಿಗ್ರಿ ಬಂದು ತಲುಪಿದ್ದ.

No comments:

Post a Comment

ಜೀವನ್ ಮೃತ್ಯು ! ಕೊರೊನ ನಡುವೆ ಬದುಕು ಹೇಗೆ

ಸ್ನೇಹಿತರೇ, ನಮಗೆ ತಿಳಿದಿರುವ ಹಾಗೇ ಈ ಜಗತ್ತಿನಲ್ಲಿ ನಾವು ಊಹೆಗೂ ನಿಲುಕಿಸದ ಪರಿಸ್ಥಿತಿ ಬಂದೊದಗಿದೆ. ಕಾಲವು ಚಲಿಸುತ್ತಲೇ ಇದೆ ಆದರೆ ಈ ಕಾಲವನ್ನು ಕಣ್ಣಿ...