Tuesday 5 December 2017

ಮುಂದೊಂದಿನ ಹಿಂತಿರುಗಿದಾಗ

ನೆನಪಿನ ಮನೆಯಲಿ
ಒಂದು ಕೋಣೆ ತೆಗಿದಿದೆ.
ನನ್ನ ಕರೆದಿದೆ,ಬಾಲ್ಯವ ತೆರೆದು
ಕಣ್ಣಿಗೆ ಮುಸುಕು ಬಂದಿದೆ.

ಮರೆತ     ಮನವು
ನೆನಪುಗಳೊಡನೆ ಸಾಗಿದೆ.
ನಾ ತಿಳಿಯದೆ, ಬಾಲ್ಯದ ಬಯಕೆಗೆ
ಅಪ್ಪನ ಕೊಡುಗೆ ಕಂಡಿದೆ
ಖುಷಿ ಸಾಲದೆ.
ಗುರಿಯೊಂದಿಗೆ.

ಗೆಳೆಯರ ಬಳಗದಿ
ಕೂಡಿ ಮಾಡಿದ ಕಥೆಯಿದೆ.
ಒಂದು ವ್ಯಥೆಯಿದೆ,ನನ್ನಯ ತಪ್ಪಲು
ಅಮ್ಮನ ವಾದವು ಪರವಿದೆ.
ನನಗರಿವಿದೆ.

ನಗುವ ಮನಸು
ಹೇಳದೆ ಕೇಳದೇ ಮರೆಯಾಗಿದೆ.
ಗೊತ್ತಾಗಿದೆ,ವಯಸ್ಸು ಎಂಬುದು
ನಗುವನೆ ಕೊಂದು ಹಾಕಿದೆ.
ಗೊತ್ತಾಗದೆ.

ನೆನಪಿನ ಮನೆಯಲಿ
ಒಂದು ಕೋಣೆ ತೆಗೆದಿದೆ.
ನನ್ನ ಕರೆದಿದೆ, ಬಾಲ್ಯವ ತೆರೆದು
ಕಣ್ಣಿಗೆ ಮುಸುಕು ಬಂದಿದೆ.

ಸಂಕೇತ ಜಿ ಎಮ್ ತೀರ್ಥಹಳ್ಳಿ.

2 comments:

ಜೀವನ್ ಮೃತ್ಯು ! ಕೊರೊನ ನಡುವೆ ಬದುಕು ಹೇಗೆ

ಸ್ನೇಹಿತರೇ, ನಮಗೆ ತಿಳಿದಿರುವ ಹಾಗೇ ಈ ಜಗತ್ತಿನಲ್ಲಿ ನಾವು ಊಹೆಗೂ ನಿಲುಕಿಸದ ಪರಿಸ್ಥಿತಿ ಬಂದೊದಗಿದೆ. ಕಾಲವು ಚಲಿಸುತ್ತಲೇ ಇದೆ ಆದರೆ ಈ ಕಾಲವನ್ನು ಕಣ್ಣಿ...